ಈ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಗಳಲ್ಲಿ ಆಗಾಗ ದಾಳಿ ನಡೆಸಿ ಕುರಿ, ಮೇಕೆ, ನಾಯಿ, ಜಾನುವಾರುಗಳನ್ನು ಕೊಂದು ಹಾಕುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರಿಂದಾಗಿ ಈ ಭಾಗದ ಜನರು ಸದಾ ಭಯದ ವಾತಾವರಣದಲ್ಲೇ ಜೀವಿಸುವಂತಾಗಿದೆ ಎಂದು ಗ್ರಾಮಸ್ಥ ಡಿ.ಬಿ. ಚೇತನ್ ಕುಮಾರ್ ಎಂಬವರು ಹೇಳಿದರು.