ಚನ್ನಪಟ್ಟಣದ ಮೂರ್ತಿಮಹಲ್ ರಸ್ತೆಯಲ್ಲಿ ಭೂತಬಂಗಲೆಯಾಗಿರುವ ಮಟನ್ ಮಾರುಕಟ್ಟೆ
ಚಿಕ್ಕಮಳೂರು ಮಟನ್ ಮಾರುಕಟ್ಟೆ ಒಳಗೆ ಕಸದ ರಾಶಿ
ನಗರದ ಎರಡು ಕಡೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವ ನಗರಸಭೆ ಅಲ್ಲಿಗೆ ಮಾಂಸದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕು. ಸಾರ್ವಜನಿಕ ಹಣ ವ್ಯಯಿಸಿ ಕಟ್ಟಡ ಕಟ್ಟಲಾಗಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಬೇಕು. ಅವುಗಳನ್ನು ಖಾಲಿ ಬಿಟ್ಟರೆ ಅನೈತಿಕ ಚಟುವಟಿಕೆ ನಡೆಯಲು ಅವಕಾಶ ನೀಡಿದಂತಾಗುತ್ತದೆ.
–ಎಚ್.ಪಿ. ಶ್ರೇಯಸ್ ಗೌಡ, ಸ್ಥಳೀಯ
ನಗರಸಭೆ ಅಧಿಕಾರಿಗಳು ಇಂತಹ ಅನೇಕ ಕಟ್ಟಡಗಳನ್ನು ಕಟ್ಟಿ ವ್ಯರ್ಥವಾಗಿ ಬಿಟ್ಟಿದ್ದಾರೆ. ಸಾರ್ವಜನಿಕರಿಂದ ಕರವಸೂಲಿ ಮಾಡುವ ನಗರಸಭೆ ಈ ರೀತಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸಿ ಪಾಳು ಬಿಡುವುದು ಯಾವ ಪುರುಷಾರ್ಥಕ್ಕೆ. ಈಗ ನಗರಸಭಾ ಬಜೆಟ್ ಸಭೆ ನಡೆಯುತ್ತಿವೆ. ಈ ಬಾರಿಯ ಬಜೆಟ್ನಲ್ಲಿ ಹಣ ಮೀಸಲಿಟ್ಟು ಈ ಕಟ್ಟಡಗಳನ್ನು ಸುಸಜ್ಜಿತಗೊಳಿಸಿ ಮಾಂಸ ಮಾರಾಟಗಾರರಿಗೆ ನೀಡಬೇಕು.
–ಅಬ್ಬೂರು ರಾಜಮುಡಿ, ನಿವೃತ್ತ ನೌಕರ ಚನ್ನಪಟ್ಟಣ.
ನಗರಸಭೆಯ ಪಾಳುಬಿದ್ದಿರುವ ಆಸ್ತಿಪಾಸ್ತಿಗಳ ಅಭಿವೃದ್ಧಿಗೆ ಯೋಚಿಸಲಾಗಿದೆ. ಬಜೆಟ್ ಮೂರು ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಸಂಘಸಂಸ್ಥೆಗಳು ಹಿರಿಯ ನಾಗರೀಕರ ಸಲಹೆ ಸೂಚನೆಗಳನ್ನು ಪಡೆಯಲಾಗುವುದು. ಪಾಳು ಬಿದ್ದಿರುವ ಮಟನ್ ಮಾರುಕಟ್ಟೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.