ಘಟನೆಯಲ್ಲಿ ರಾಮನಗರ, ಕೊತ್ತೀಪುರ, ಹೊಸೂರು. ಹುಣನಸಹಳ್ಳಿ ಗ್ರಾಮಗಳ ನಿವಾಸಿಗಳಾದ ಪ್ರೇಮಕುಮಾರಿ, ಜಯಮ್ಮ, ಉಮಾ, ಮಂಜುಳಾ, ದುರ್ಗೇಶ್, ಪುಟ್ಟತಾಯಮ್ಮ, ತೇಜಸ್ವಿನಿ, ಶ್ರೀಕಂಠರಾಜು, ಸೇವಂತ್, ಜಯಲಕ್ಷ್ಮಿ ಹಾಗೂ ವಾಹನ ಚಾಲಕ ಜಗದೀಶ್ ಗಾಯಗೊಂಡರು. ಭಾಗ್ಯಮ್ಮ, ಮಂಜಮ್ಮ, ತಾಯಕ್ಕ ಸೇರಿ ಆರು ಮಂದಿಗೆ ಹೆಚ್ಚಿನ ಗಾಯಗಳಾಗಿದ್ದು, ಬೆಂಗಳೂರಿಗೆ ಕರೆದೊಯ್ಯಲಾಯಿತು. ಉಳಿದವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.