ಗಿರಿಯಪ್ಪ ತಮ್ಮ ಸಂಬಂಧಿಕರಾದ ವಿದ್ಯಾರ್ಥಿನಿಯರನ್ನು ಶಾಲೆಗೆ ಬಿಡುವ ಸಲುವಾಗಿ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಮತ್ತೊಂದು ಸ್ಕೂಟರ್ನಲ್ಲಿ ಲತೇಶ್ ಸಹ ಕುಂಬಳಗೋಡು ಕಡೆ ತೆರಳುತ್ತಿದ್ದರು. ಈ ವೇಳೆ ಕುಂಬಳಗೋಡಿನಿಂದ ಬಿಡದಿ ಕಡೆಗೆ ಬರುತ್ತಿದ್ದ ಕಾರ್ ಚಾಲಕನಅಜಾಗರೂಕತೆಯಿಂದ ಸ್ಕೂಟರ್ಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಗಿರಿಯಪ್ಪ ತೀವ್ರ ಗಾಯಗಳಿಂದ ಮಾರ್ಗ ಮಧ್ಯೆಯೇ ಮೃತಪಟ್ಟರು.