ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಬೆಳವಂಗಲ ಮತ್ತು ಎಎಸ್ಐ ಕೃಷ್ಣಪ್ಪ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಗೃಹರಕ್ಷಕ ದಳದ ನರಸಿಂಹಮೂರ್ತಿ ಮತ್ತು ಯುವಕರ ಸಹಾಯದಿಂದ ಯಂತ್ರದ ಕೆಳಗೆ ಸಿಲುಕಿ ದೇಹವನ್ನು ಹೊರತೆಗೆಯಲಾಯಿತು. ಪಂಕ್ಚರ್ ಶಾಪ್ ಪಕ್ಕದಲ್ಲಿರುವ ಕೋಳಿ ಮಾರಾಟ ಕೇಂದ್ರದ ಶೀಟುಗಳೂ ಪುಡಿಯಾಗಿವೆ. ರವಿ ಅವರ ಕಣ್ಣನ್ನು ಬಿಡದಿಯ ಕಣ್ಣಿನ ಆಸ್ಪತ್ರೆಗೆ ನೇತ್ರದಾನ ಮಾಡಲಾಯಿತು. ಜಡೇದೇವರ ಮಠದ ರಸ್ತೆಯಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.