ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಮುಂದೆ ಶುಭವಾಗಿ ಐಶ್ಚರ್ಯ ದುಪ್ಪಟ್ಟಾಗುತ್ತದೆ ಎನ್ನುವುದು ಜನರ ನಂಬಿಕೆ. ಹೀಗಾಗಿ ಗ್ರಾಹಕರು ಬೆಳಗ್ಗೆಯಿಂದಲೇ ಪ್ರಮುಖ ಆಭರಣ ಮಳಿಗೆಗಳ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಯಾವ ಅಂಗಡಿಯಲ್ಲಿ ಏನೆಲ್ಲ ರಿಯಾಯಿತಿ ಇದೆ. ಬೆಲೆ ಎಷ್ಟು? ತಯಾರಿಕೆಯ ಶುಲ್ಕ ಎಷ್ಟು ಎಂಬುದನೆಲ್ಲ ವಿಚಾರಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಭರಣ ಕೊಂಡು ಸಂಭ್ರಮಿಸಿದರು. ಕೆಲವರು ಬಂಗಾರದ ಕಿರು ನಾಣ್ಯಗಳನ್ನು ಒಯ್ದರು. ಪ್ರಸಿದ್ಧ ಆಭರಣ ಮಳಿಗೆಗಳಲ್ಲಿ ಕಾಲಿಡಲು ಜಾಗವಿಲ್ಲದಂತಹ ಪರಿಸ್ಥಿತಿ ಇದ್ದು, ಜನರು ಸಾಲುಗಟ್ಟಿ ನಿಂತಿದ್ದರು. ರಾತ್ರಿವರೆಗೂ ವ್ಯಾಪಾರ ನಡೆಯಿತು.