ಅಧ್ಯಕ್ಷತೆವಹಿಸಿದ್ದ ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ ಮಾತನಾಡಿ, ವಿಶ್ವದಾದ್ಯಂತ ಕೀರ್ತಿ ಗಳಿಸಿರುವ ಭಾರತ ರತ್ನ ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾನ್ ಮಾನವತಾವಾದಿ. ಅವರ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳು ಭಾರತದ ಮುನ್ನಡೆಗೆ ಹೊಸ ಆಯಾಮಗಳನ್ನು ತಂದುಕೊಟ್ಟಿತು. ಅವರ ಜ್ಞಾನ, ಶಿಸ್ತು, ಶ್ರದ್ಧೆ, ಹೋರಾಟದ ಮನೋಭಾವದಂತಹ ಗುಣಗಳು ವಿದ್ಯಾರ್ಥಿಗಳಿಗೆ ಮಾದರಿ ಎಂದರು.