ಸೋಲಿಗ ಕುಟುಂಬಕ್ಕೆ ನೆರವು

ಮಾಗಡಿ: ತಿರುಮಲೆ ಕೊಳಚೆ ನಿರ್ಮೂಲನಾ ಮಂಡಳಿ ಮನೆಯಲ್ಲಿ ತಾತ್ಕಾಲಿಕ ವಸತಿಯಲ್ಲಿದ್ದ ಸೋಲಿಗ ಮಂಜುನಾಥ್ ಕುಟುಂಬದವರಿಗೆ ದಾನಿಗಳು ಕೊಟ್ಟಿದ್ದ ವಸ್ತುಗಳನ್ನು ಕಳವು ಮಾಡಿರುವ ಸುದ್ದಿ ತಿಳಿದ ಕೂಡಲೇ ಜ್ಯೋತಿಪಾಳ್ಯದ ಕುಂಬಾರರ ಸಂಘದಿಂದ ನೆರವು
ನೀಡಲಾಯಿತು.
ಸಂಘದ ನಿರ್ದೇಶಕರಾದ ವೆಂಕಟರಂಗಯ್ಯ, ರಾಜೇಶ್, ಕೃಷ್ಣಮೂರ್ತಿ ನಾರಾಯಣ್ ಆಗಮಿಸಿ ಕುಡಿಯುವ ನೀರು ಸಂಗ್ರಹಿಸಿಟ್ಟು ಕೊಳ್ಳಲು ಮಣ್ಣಿನ ಗುಡಾಣ, ಪಾತ್ರೆಗಳು ಮತ್ತು ನಗದನ್ನು ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದರು.
ಕುಂಬಾರರ ಸಂಘದ ನಿರ್ದೇಶಕ ವೆಂಟಕರಂಗಯ್ಯ ಮಾತನಾಡಿ, ದಿಕ್ಕಿಲ್ಲದ ಸೋಲಿಗ ಕುಟುಂಬಕ್ಕೆ ದಾನಿಗಳು ಉದಾರವಾಗಿ ನೀಡಿದ್ದ ದವಸಧಾನ್ಯ, ಬಟ್ಟೆ, ಪಾತ್ರೆ, ಹೊದಿಕೆ ದೋಚಿರುವುದು ನಾಚಿಕೆಗೇಡಿನ ಸಂಗತಿ. ದಿಕ್ಕಿಲ್ಲದವರಿಗೆ ನೆರವು ನೀಡುವುದು ಮನುಷ್ಯರ ಮಹತ್ವದ ಉದ್ದೇಶವಾಗಬೇಕು ಎಂದರು.
‘ಮಣ್ಣನ್ನು ನಂಬಿ ಬದುಕುತ್ತಿದ್ದ ಕುಂಬಾರ ಸಮುದಾಯದವರ ನೆರವಿಗೆ ಯಾರೂ ಮುಂದಾಗುತ್ತಿಲ್ಲ. ಹುಟ್ಟಿನಿಂದ ಚಟ್ಟದವರೆಗೆ ಮಣ್ಣಿನಿಂದ ಕುಂಬಾರರು ತಯಾರಿಸಿದ್ದ ಮಡಿಕೆ ಕುಡಿಕೆಗಳು ಅಗತ್ಯವಾಗಿ ಬೇಕಾಗಿವೆ. ನಾವೂ ಸಿರಿವಂತರಲ್ಲ. ಆದರೆ, ದಿಕ್ಕಿಲ್ಲದವರನ್ನು ಕಂಡಾಗ ನಾವು ತಿನ್ನುವ ಅನ್ನದಲ್ಲಿ ಒಂದು ತುತ್ತು ನೀಡುವ ಹಂಬಲ ನಮ್ಮದು’ ಎಂದು ನಿರ್ದೇಶಕ ರಾಜೇಶ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.