‘ಕೇವಲ ಎರಡು ಮೂರು ಜಿಲ್ಲೆಗಳಲ್ಲಿ ಮಹಾರಾಷ್ಟ್ರದವರು ಕ್ಯಾತೆ ತೆಗೆಯುತ್ತಿದ್ದಾರೆ. ಅಲ್ಲಿ ವಾಸವಿರುವ ಮರಾಠಿಗರು ಕನ್ನಡದ ವಿರುದ್ಧವಿದ್ದಾರೆ. ಆದರೆ, ಇಡೀ ರಾಜ್ಯದಲ್ಲಿ ಮರಾಠಿ ಭಾಷಿಕರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಅವರು ನಮ್ಮಲ್ಲಿಯೇ ಬೆರೆತು ಹೋಗಿದ್ದಾರೆ. ಕೇವಲ ಕೆಲವರು ಮಾತ್ರ ಕನ್ನಡ ವಿರೋಧಿಸುತ್ತಾರೆ ಎಂದರೆ ಎಲ್ಲರೂ ವಿರೋಧಿಗಳಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಮತ ಪಡೆಯುವ ಸಲುವಾಗಿ ಯಾವುದೇ ಇಂತಹ ಅನವಶ್ಯ ನಿರ್ಧಾರ ತೆಗೆದುಕೊಳ್ಳಬಾರದು. ಭಾಷಿಕರ ಮಧ್ಯೆ ವಿಷಬೀಜ ಬಿತ್ತಬಾರದು’ ಎಂದು ಹೇಳಿದರು.