ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ಭಕ್ತರೊಬ್ಬರು ದೇವಿಗೆ ಬಿಟ್ಟಿದ್ದ ಬಸವ ಇದಾಗಿದ್ದು, ಎಲ್ಲರ ಜಮೀನಿನಲ್ಲಿ ಸ್ವೇಚ್ಛೆಯಾಗಿ ಮೇವನ್ನು ತಿಂದು ಆರೋಗ್ಯವಾಗಿತ್ತು. ಕೆಲವು ದಿನಗಳ ಹಿಂದ ರೈತರೊಬ್ಬರು ರೇಷ್ಮೆಸೊಪ್ಪಿಗೆ ತಗಲುವ ಹುಳುವನ್ನು ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಿದ್ದು ಆ ಸೊಪ್ಪನ್ನು ತಿಂದು ಬಸವ ಅನಾರೋಗ್ಯಕ್ಕೆ ಸಿಲುಕಿತ್ತು.