ಉಳಿದಂತೆ ರೈತರ ಜಮೀನಿನಲ್ಲಿ ಉರುಳಿರುವ ವಿದ್ಯುತ್ ಕಂಬಗಳನ್ನು ನಿಲ್ಲಿಸಲಾಗುತ್ತಿದೆ. ಸಂಪೂರ್ಣವಾಗಿ ಮುರಿದಿರುವ ಕಂಬಗಳನ್ನು ಬದಲಾಯಿಸಿ ಹೊಸ ಕಂಬ ಹಾಕಬೇಕಿರುವುದರಿಂದ ಆ ಕೆಲಸವು ವಿಳಂಬವಾಗುತ್ತಿದೆ. ಎಲ್ಲ ವಿದ್ಯುತ್ ಮಾರ್ಗಗಳು ಸರಿಹೋಗುವ ವರೆಗೂ ವಿದ್ಯುತ್ ಪೂರೈಕೆ ಸಾಧ್ಯವಾಗುವುದಿಲ್ಲವೆಂದು ಇಲಾಖೆ ತಿಳಿಸಿದೆ.