ಮಾಗಡಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಜಯಶಾಲಿಯಾಗುವುದು ಖಚಿತ ಕೆಲವರು ಬೆಟ್ಟಿಂಗ್ ಕಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ ಗೆಲುವು ಖಚಿತ ಎಂದು ಕೆಲವರು ಬೆಟ್ಟಿಂಗ್ ಕಟ್ಟಿದ್ದಾರೆ. ₹1ಲಕ್ಷದಿಂದ ₹5ಲಕ್ಷದವರೆಗೆ ಬೆಟ್ಟಿಂಗ್ ನಡೆದಿದೆ.
ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾಗಡಿಯಲ್ಲಿ ಬೆಟ್ಟಿಂಗ್₹2ಲಕ್ಷದಿಂದ ₹10ಲಕ್ಷದವರೆಗೆ ಕಟ್ಟಲಾಗಿದೆ.
ಅಷ್ಟೇ ಪ್ರಮಾಣದಲ್ಲಿ ನಿಖಿಲ್ ಕುಮಾರಸ್ವಾಮಿ ಭಾರಿ ಬಹುಮತದಿಂದ ಜಯಗಳಿಸಲಿದ್ದಾರೆ ಎಂದು ಪಣ ಕಟ್ಟಲಾಗಿದೆ. ಕಾರು, ಸ್ಕೂಟರ್ ಪಣಕ್ಕೆ ಇಡಲಾಗಿದೆ. ತಾವರೆಕೆರೆಯಲ್ಲಿ ₹10ಲಕ್ಷ ಬಾಜಿ ಕಟ್ಟಲಾಗಿದೆ. ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ವಿಶೇಷ ಪೂಜೆ ನಡೆದಿದೆ.