ವಾರ್ಡ್ ನಂ.19ರ ಸದಸ್ಯೆ ಪದ್ಮ ಬೆಟ್ಟಸ್ವಾಮಿ ಮಾತನಾಡಿ, ‘ಈಗಾಗಲೇ ಪುರಸಭೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅಬ್ಬನಕುಪ್ಪೆಯಾದ್ಯಂತ ಹೆಚ್ಚು ಕೈಗಾರಿಕಾ ಪ್ರದೇಶಗಳಿದ್ದು, ಈ ಪ್ರದೇಶದಲ್ಲಿ ಕಸ ಮುಕ್ತ ವಾರ್ಡ್ ಅನ್ನಾಗಿ ಮಾಡಲು ಸೂಚಿಸಲಾಗಿದೆ. ಕಸವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದ್ದು, ಸಾರ್ವಜನಿಕರು ಹಾಗೂ ಮಕ್ಕಳಿಗೆ ನಿರ್ಭೀತ ವಾತಾವರಣ ನಿರ್ಮಿಸುವಂತೆ ಮುಖ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.