ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಪರವಾಗಿ ಪಕ್ಷದ ಪದಾಧಿಕಾರಿಗಳು ಇಲ್ಲಿನ ಅಚ್ಚಲು ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿದರು.
‘ರಾಜ್ಯದ ಮೈತ್ರಿ ಸರ್ಕಾರದ ಬಗ್ಗೆ ಜನತೆಗೆ ಬೇಸರ ಉಂಟಾಗಿದೆ. ಮೋದಿ ಆಡಳಿತ ಜನ ಮೆಚ್ಚಿದ್ದಾರೆ. ಪ್ರತಿ ಗ್ರಾಮದಲ್ಲೂ ಮೋದಿ ಅಭಿಮಾನಿಗಳು ಇದ್ದಾರೆ. ಮೋದಿಯವರ ಐದು ವರ್ಷದ ಆಡಳಿತದಲ್ಲಿ ಕಾರ್ಮಿಕರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಯುವಕರಿಗೆ, ಮಹಿಳೆಯರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದು ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಆರ್. ನಾಗರಾಜ್ ತಿಳಿಸಿದರು.
‘ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್–-ಜೆಡಿಎಸ್ನಲ್ಲಿ ಒಡಕುಂಟಾಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದರು.
ಮುಖಂಡರಾದ ಮಂಜು, ಡಿ. ಶ್ರೀನಿವಾಸ್, ಪಾಪಣ್ಣ, ವಿಶ್ವನಾಥ್, ಲೋಕೇಶ್, ಶ್ರೀನಿವಾಸ್, ಟೇಕಲ್ ಬಾಬು, ಬಿ. ನಾಗೇಶ್, ಪಾಪು ಇದ್ದರು.