ಸ್ಪರ್ಧೆಗೆ ನಿಂತರೆ ಬೆಂಬಲ: ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ , ಸಿಪಿವೈ ಅಭ್ಯರ್ಥಿಯಾದರೆ ನಮ್ಮೆಲ್ಲರ ಬೆಂಬಲ ಇದೆ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಕರ್ತರೊಟ್ಟಿಗೆ ಮಾತನಾಡಿದ ಅವರು ‘ಯೋಗೇಶ್ವರ್ ಅವರೇ ನಮ್ಮ ಅಭ್ಯರ್ಥಿ ಆದರೆ ಒಳ್ಳೆಯದು. ಪಕ್ಷದ ಹೈಕಮಾಂಡ್ ಸಹ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ’ ಎಂದರು.