ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರದಲ್ಲಿ ಕೈಕೊಟ್ಟ ಇಂಟರ್ನೆಟ್: ಸಿಇಟಿ ದಾಖಲೆ ಪರಿಶೀಲನೆಗೆ ಅಡ್ಡಿ

Last Updated 6 ಜೂನ್ 2019, 8:43 IST
ಅಕ್ಷರ ಗಾತ್ರ

ರಾಮನಗರ: ಸಿಇಟಿ ಕೌನ್ಸೆಲಿಂಗ್ ಪೂರ್ವಭಾವಿಯಾಗಿ ಇಲ್ಲಿನ ಶಾಂತಿ ನಿಕೇತನ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಕಾರ್ಯವು ಅಂತರ್ಜಾಲ‌ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ.

ಕರ್ನಾಟಕ ಪರೀಕ್ಷಾ‌ ಪ್ರಾಧಿಕಾರವು ಈ ವರ್ಷದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೇ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದೆ. ಅಂತೆಯೇ ರಾಮನಗರದಲ್ಲಿ ಎರಡು ಕೌಂಟರ್ ತೆರೆಯಲಾಗಿದೆ. ಆದರೆ ಬಿಎಸ್‌ಎನ್‌ಎಲ್‌ಬ್ರಾಡ್‌ಬ್ಯಾಂಡ್ ಸೇವೆ ವ್ಯತ್ಯಯದಿಂದಾಗಿ‌ ದಾಖಲೆ ಪರಿಶೀಲನೆಯು ಇನ್ನೂ ಆರಂಭಗೊಂಡಿಲ್ಲ.

ಮೊದಲ ದಿನದಂದು ಮೊದಲ ಎರಡು ಸಾವಿರ ರ‍್ಯಾಂಕ್ಒಳಗಿನ ಅಭ್ಯರ್ಥಿಗಳ‌ ದಾಖಲೆಗಳ ಪರಿಶೀಲನೆಯು ನಡೆಯಲಿವೆ. ಇದೇ 19ರವರೆಗೂ ಈ ಕಾರ್ಯವು ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT