ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ವರ್ಷದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೇ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದೆ. ಅಂತೆಯೇ ರಾಮನಗರದಲ್ಲಿ ಎರಡು ಕೌಂಟರ್ ತೆರೆಯಲಾಗಿದೆ. ಆದರೆ ಬಿಎಸ್ಎನ್ಎಲ್ಬ್ರಾಡ್ಬ್ಯಾಂಡ್ ಸೇವೆ ವ್ಯತ್ಯಯದಿಂದಾಗಿ ದಾಖಲೆ ಪರಿಶೀಲನೆಯು ಇನ್ನೂ ಆರಂಭಗೊಂಡಿಲ್ಲ.