ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಕ್ಕೆ ಕಾರು ಡಿಕ್ಕಿ; ಮೂವರು ಸಾವು

ಮಾಗಡಿ
Last Updated 23 ಜೂನ್ 2019, 6:27 IST
ಅಕ್ಷರ ಗಾತ್ರ

ರಾಮನಗರ:​ ಮರಕ್ಕೆ ಕಾರು ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವಿಗೀಡಾಗಿದ್ದಾರೆ.

ಮಾಗಡಿ–ಕುಣಿಗಲ್ ರಸ್ತೆಯ ಜನತಾ ಕಾಲೊನಿ ತಿರುವಿನಲ್ಲಿ ಶನಿವಾರ ತಡರಾತ್ರಿ ಈ ಅಪಘಾತ ಆಗಿದೆ.

ಶ್ರೀಪತಿಹಳ್ಳಿ ನಿವಾಸಿ ನರಸಮ್ಮ (65), ತಾಮಸಂದ್ರ ನಿವಾಸಿ ಕುಮಾರ್ (28) ಹಾಗೂತಾಳೆಕೆರೆ‌‌ ನಿವಾಸಿ ಜಯಲಕ್ಷ್ಮಮ್ಮ (46) ಮೃತರು.

ಕರೇನಹಳ್ಳಿಯಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡುತಾಳೆಕೆರೆಗೆ ವಾಪಸ್ ಆಗುತ್ತಿದ್ದ ಸಂದರ್ಭ ರಾತ್ರಿ‌ 2.30ರ ಸುಮಾರಿಗೆರಸ್ತೆಯ ತಿರುವಿನಲ್ಲಿ ಕಾರುಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಪ್ರಶಾಂತ್ ಹಾಗು ಗಂಗಲಕ್ಷ್ಮಮ್ಮ ಎಂಬುವರು ಗಾಯಗೊಂಡರು. ಗಾಯಾಳುಗಳನ್ನು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ‌ ಶವಗಳ ಮರಣೋತ್ತರ ಪರೀಕ್ಷೆ‌ ನಡೆಯಿತು. ಮಾಗಡಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT