<p><strong>ರಾಮನಗರ:</strong> ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುವ ಚೀಲಂದವಾಡಿ ಅರಣ್ಯದ ಕಂದಾಯ ಜಮೀನಿನಲ್ಲಿ ಆಚಾರ್ಯ ಕುಟೀರ ವಸತಿ ಸಂಕೀರ್ಣಕ್ಕೆ ಯೋಜನೆ ಸಿದ್ಧವಾಗಿದೆ. ಇದಕ್ಕೆ ಪರಿಸರವಾದಿಗಳು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. </p>.<p>ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಓಂ ಶಾಂತಿಧಾಮ ಟ್ರಸ್ಟ್ ವತಿಯಿಂದ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚೀಲಂದವಾಡಿ ಸರ್ವೆ ನಂಬರ್ 2, 3, 4, 5, 6 ಹಾಗೂ 7ರ ಕಂದಾಯ ಭೂಮಿಯಲ್ಲಿ ಒಟ್ಟು 10 ನಿವೇಶನಗಳಲ್ಲಿ ವಸತಿ ಸಂಕೀರ್ಣ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆ ಅನುಮತಿಗಾಗಿ ಟ್ರಸ್ಟ್ ಎದುರು ನೋಡುತ್ತಿದೆ.</p>.<p><strong>ಆವಾಸಸ್ಥಾನ: </strong>‘ಕಾವೇರಿ ವನ್ಯಜೀವಿ ವಿಭಾಗ ಕಾಡಾನೆ, ಚಿರತೆ, ಜಿಂಕೆ, ಕಾಡುಕೋಣ, ಕಾಡುಹಂದಿ, ನವಿಲು, ಹಾವು, ಮಂಗಗಳು ಸೇರಿದಂತೆ ಅಪರೂಪದ ವನ್ಯಜೀವಿಗಳು ಹಾಗೂ ವೈವಿಧ್ಯಮಯ ಮರಗಿಡಗಳ ಆವಾಸಸ್ಥಾನವಾಗಿದೆ’ ಎಂದು ಪರಿಸರವಾದಿ ಗುರುಪ್ರಸಾದ್ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.</p>.<p>‘ಕಾವೇರಿ ನದಿಯ ಸಂಗಮ-ಮೇಕೆದಾಟು ಬಳಿ ಓಂ ಶಾಂತಿಧಾಮ ಟ್ರಸ್ಟ್ ಪ್ರಸ್ತುತ ಗುರುಕುಲ ಶಿಕ್ಷಣ ಮತ್ತು ಯೋಗ ತರಬೇತಿ ನೀಡುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಇಂತಹದ್ದಕ್ಕೆಲ್ಲ ಅವಕಾಶವನ್ನೇ ನೀಡಬಾರದಿತ್ತು’ ಎಂದು ಆಗ್ರಹಿಸಿದರು.</p>.<p><strong>ಈಗಾಗಲೇ ಧಕ್ಕೆ: </strong>‘ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಈಗ ರೆಸಾರ್ಟ್, ಹೋಂಸ್ಟೆಗಳಿವೆ. ಮಿತಿ ಮೀರಿದ ಪ್ರವಾಸಿಗರ ಭೇಟಿ ಹಾಗೂ ವಾಹನಗಳ ಸಂಚಾರದಿಂದ ವನ್ಯಜೀವಿಗಳಿಗೂ ತೊಂದರೆಯಾಗುತ್ತಿದೆ. ವಸತಿ ಸಂಕೀರ್ಣಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಧಕ್ಕೆಯಾಗಲಿದೆ’ ಎಂದು ಕನಕಪುರ ತಾಲ್ಲೂಕು ರೈತ ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.</p>.<p><strong>ಅನುಮತಿ ನೀಡುವುದೇ ಮೇಲ್ವಿಚಾರಣೆ ಸಮಿತಿ?</strong></p><p>ವಸತಿ ಸಂಕೀರ್ಣಕ್ಕೆ ಅನುಮತಿ ಕೋರಿ ಶಾಂತಿಧಾಮ ಟ್ರಸ್ಟ್ ಅಧ್ಯಕ್ಷ ಜಿ.ಅನಂತಪ್ಪ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ವಿಷಯ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೇ 25ರಂದು ನಡೆಯುವ ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣೆ ಸಮಿತಿ ಸಭೆ ಮುಂದೆ ಚರ್ಚೆಗೆ ಬರಲಿದೆ.</p><p>ಸಭೆಯಲ್ಲಿ ಕನಕಪುರ, ಮಳವಳ್ಳಿ, ಹನೂರು ಕ್ಷೇತ್ರಗಳ ಶಾಸಕರು, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿಗಳು (ಬೆಂಗಳೂರು ದಕ್ಷಿಣ, ಮಂಡ್ಯ, ಚಾಮರಾಜನಗರ), ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪರಿಸರವಾದಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ 16 ಮಂದಿ ಭಾಗವಹಿಸಲಿದ್ದಾರೆ. ವಸತಿ ಸಂಕೀರ್ಣಕ್ಕೆ ಸಮಿತಿ ಒಪ್ಪಿಗೆ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.</p>.<div><blockquote>ಟ್ರಸ್ಟ್ನ ಉದ್ದೇಶಿತ ವಸತಿ ಸಂಕೀರ್ಣ ನಿರ್ಮಾಣ ಪರಿಸರಕ್ಕೆ ಮಾರಕವಾಗಿದೆ. ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. </blockquote><span class="attribution">–ಗುರುಪ್ರಸಾದ್, ಪರಿಸರವಾದಿ</span></div>.<div><blockquote>ಇದು ಪರಿಸರ ಸೂಕ್ಷ್ಮ ವಲಯ. ಯಾವುದೇ ಕಾರಣಕ್ಕೂ ವಸತಿ ಸಂಕೀರ್ಣ ನಿರ್ಮಿಸಲು ಅವಕಾಶ ಕೊಡಬಾರದು. ಅನುಮತಿ ಕೊಟ್ಟರೆ ರೈತ ಸಂಘ ಪ್ರತಿಭಟಿಸಲಿದೆ. </blockquote><span class="attribution">–ನಲ್ಲಹಳ್ಳಿ ಶ್ರೀನಿವಾಸ್, ರೈತ ಸಂಘ, ಕನಕಪುರ ತಾಲ್ಲೂಕು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುವ ಚೀಲಂದವಾಡಿ ಅರಣ್ಯದ ಕಂದಾಯ ಜಮೀನಿನಲ್ಲಿ ಆಚಾರ್ಯ ಕುಟೀರ ವಸತಿ ಸಂಕೀರ್ಣಕ್ಕೆ ಯೋಜನೆ ಸಿದ್ಧವಾಗಿದೆ. ಇದಕ್ಕೆ ಪರಿಸರವಾದಿಗಳು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. </p>.<p>ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಓಂ ಶಾಂತಿಧಾಮ ಟ್ರಸ್ಟ್ ವತಿಯಿಂದ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚೀಲಂದವಾಡಿ ಸರ್ವೆ ನಂಬರ್ 2, 3, 4, 5, 6 ಹಾಗೂ 7ರ ಕಂದಾಯ ಭೂಮಿಯಲ್ಲಿ ಒಟ್ಟು 10 ನಿವೇಶನಗಳಲ್ಲಿ ವಸತಿ ಸಂಕೀರ್ಣ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆ ಅನುಮತಿಗಾಗಿ ಟ್ರಸ್ಟ್ ಎದುರು ನೋಡುತ್ತಿದೆ.</p>.<p><strong>ಆವಾಸಸ್ಥಾನ: </strong>‘ಕಾವೇರಿ ವನ್ಯಜೀವಿ ವಿಭಾಗ ಕಾಡಾನೆ, ಚಿರತೆ, ಜಿಂಕೆ, ಕಾಡುಕೋಣ, ಕಾಡುಹಂದಿ, ನವಿಲು, ಹಾವು, ಮಂಗಗಳು ಸೇರಿದಂತೆ ಅಪರೂಪದ ವನ್ಯಜೀವಿಗಳು ಹಾಗೂ ವೈವಿಧ್ಯಮಯ ಮರಗಿಡಗಳ ಆವಾಸಸ್ಥಾನವಾಗಿದೆ’ ಎಂದು ಪರಿಸರವಾದಿ ಗುರುಪ್ರಸಾದ್ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.</p>.<p>‘ಕಾವೇರಿ ನದಿಯ ಸಂಗಮ-ಮೇಕೆದಾಟು ಬಳಿ ಓಂ ಶಾಂತಿಧಾಮ ಟ್ರಸ್ಟ್ ಪ್ರಸ್ತುತ ಗುರುಕುಲ ಶಿಕ್ಷಣ ಮತ್ತು ಯೋಗ ತರಬೇತಿ ನೀಡುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಇಂತಹದ್ದಕ್ಕೆಲ್ಲ ಅವಕಾಶವನ್ನೇ ನೀಡಬಾರದಿತ್ತು’ ಎಂದು ಆಗ್ರಹಿಸಿದರು.</p>.<p><strong>ಈಗಾಗಲೇ ಧಕ್ಕೆ: </strong>‘ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಈಗ ರೆಸಾರ್ಟ್, ಹೋಂಸ್ಟೆಗಳಿವೆ. ಮಿತಿ ಮೀರಿದ ಪ್ರವಾಸಿಗರ ಭೇಟಿ ಹಾಗೂ ವಾಹನಗಳ ಸಂಚಾರದಿಂದ ವನ್ಯಜೀವಿಗಳಿಗೂ ತೊಂದರೆಯಾಗುತ್ತಿದೆ. ವಸತಿ ಸಂಕೀರ್ಣಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಧಕ್ಕೆಯಾಗಲಿದೆ’ ಎಂದು ಕನಕಪುರ ತಾಲ್ಲೂಕು ರೈತ ಸಂಘದ ಮುಖಂಡ ನಲ್ಲಹಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.</p>.<p><strong>ಅನುಮತಿ ನೀಡುವುದೇ ಮೇಲ್ವಿಚಾರಣೆ ಸಮಿತಿ?</strong></p><p>ವಸತಿ ಸಂಕೀರ್ಣಕ್ಕೆ ಅನುಮತಿ ಕೋರಿ ಶಾಂತಿಧಾಮ ಟ್ರಸ್ಟ್ ಅಧ್ಯಕ್ಷ ಜಿ.ಅನಂತಪ್ಪ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ವಿಷಯ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೇ 25ರಂದು ನಡೆಯುವ ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣೆ ಸಮಿತಿ ಸಭೆ ಮುಂದೆ ಚರ್ಚೆಗೆ ಬರಲಿದೆ.</p><p>ಸಭೆಯಲ್ಲಿ ಕನಕಪುರ, ಮಳವಳ್ಳಿ, ಹನೂರು ಕ್ಷೇತ್ರಗಳ ಶಾಸಕರು, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿಗಳು (ಬೆಂಗಳೂರು ದಕ್ಷಿಣ, ಮಂಡ್ಯ, ಚಾಮರಾಜನಗರ), ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪರಿಸರವಾದಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ 16 ಮಂದಿ ಭಾಗವಹಿಸಲಿದ್ದಾರೆ. ವಸತಿ ಸಂಕೀರ್ಣಕ್ಕೆ ಸಮಿತಿ ಒಪ್ಪಿಗೆ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.</p>.<div><blockquote>ಟ್ರಸ್ಟ್ನ ಉದ್ದೇಶಿತ ವಸತಿ ಸಂಕೀರ್ಣ ನಿರ್ಮಾಣ ಪರಿಸರಕ್ಕೆ ಮಾರಕವಾಗಿದೆ. ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. </blockquote><span class="attribution">–ಗುರುಪ್ರಸಾದ್, ಪರಿಸರವಾದಿ</span></div>.<div><blockquote>ಇದು ಪರಿಸರ ಸೂಕ್ಷ್ಮ ವಲಯ. ಯಾವುದೇ ಕಾರಣಕ್ಕೂ ವಸತಿ ಸಂಕೀರ್ಣ ನಿರ್ಮಿಸಲು ಅವಕಾಶ ಕೊಡಬಾರದು. ಅನುಮತಿ ಕೊಟ್ಟರೆ ರೈತ ಸಂಘ ಪ್ರತಿಭಟಿಸಲಿದೆ. </blockquote><span class="attribution">–ನಲ್ಲಹಳ್ಳಿ ಶ್ರೀನಿವಾಸ್, ರೈತ ಸಂಘ, ಕನಕಪುರ ತಾಲ್ಲೂಕು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>