ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಮಾರಮ್ಮ ದೇವಿಗೆ ಮೊರಗಳಿಂದ ಅಲಂಕಾರ

Last Updated 15 ಜನವರಿ 2021, 3:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ಎಳ್ಳಾಮವಾಸ್ಯೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಕೋಟೆ ಮಾರಮ್ಮ ದೇವಿಗೆ ಗುರುವಾರ ಮೊರ ಮತ್ತು ಬಳೆಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಬೆಳಿಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರತಿವರ್ಷ ಸಂಕ್ರಾಂತಿಯ ಹಿಂದಿನ ದಿನ ಹಾಗೂ ಸಂಕ್ರಾಂತಿ ದಿನ ಇಂತಹ ವಿಶೇಷ ಪೂಜೆ ನಡೆಸುವುದು ಇಲ್ಲಿನ
ವಾಡಿಕೆ.

ಹಿಂದೆ ತರಕಾರಿಗಳಿಂದ, ಹಣ್ಣುಗಳಿಂದ, ಬಾಳೆ ಎಲೆಗಳಿಂದ, ಬಳೆಗಳಿಂದ, ವೀಳ್ಯದೆಲೆ, ಅರಿಸಿನ ಕುಂಕುಮ, ಬೆಣ್ಣೆ, ನಿಂಬೆಹಣ್ಣು, ನವಧಾನ್ಯದಿಂದ ವಿಶೇಷವಾಗಿ ಅಲಂಕಾರ ಮಾಡಲಾಗುತ್ತಿತ್ತು. ಈ ವರ್ಷ ಮೊರ ಮತ್ತು ಬಳೆಗಳಿಂದ ಅಲಂಕಾರ ಮಾಡಲಾಗಿದೆ ಎಂದು ಅರ್ಚಕ ಆರ್.ಕೆ. ಮಲವೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT