ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕುಟುಂಬಕ್ಕೂ ಕಬ್ಬಿನ ಜಲ್ಲೆ ವಿತರಣೆ

Last Updated 15 ಜನವರಿ 2021, 3:20 IST
ಅಕ್ಷರ ಗಾತ್ರ

ಕನಕಪುರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರಸಭೆಯ 24ನೇ ವಾರ್ಡಿನ ಸದಸ್ಯ ವೆಂಕಟೇಶ್‌ ಅವರು ಜನರಿಗೆ ಕಬ್ಬಿನ ಜಲ್ಲೆ ವಿತರಣೆ ಮಾಡುವ ಮೂಲಕ ಶುಭಾಶಯ ಕೋರಿದರು.

ವೆಂಕಟೇಶ್‌ ಮಾತನಾಡಿ, ‘ನಾನು ಸದಸ್ಯನಾದ ಮೇಲೆ ಇದೇ ಮೊದಲ ಹಬ್ಬವಾಗಿದೆ. ವಾರ್ಡಿನ ಎಲ್ಲಾ ಮತದಾರರಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಪ್ರತಿ ಮನೆಗೂ ಎರಡು ಕಬ್ಬಿನ ಜಲ್ಲೆಯನ್ನು ಉಚಿತವಾಗಿ ವಿತರಿಸಿದ್ದೇನೆ’ ಎಂದು ತಿಳಿಸಿದರು.

ವಾರ್ಡಿನಲ್ಲಿ 650 ಮನೆಗಳಿವೆ. ಪ್ರತಿ ಮನೆಗೆ ಕಬ್ಬಿನ ಜಲ್ಲೆ ನೀಡಲು ಮದ್ದೂರಿನ ಶಿವಪುರ ರೈತರಿಂದ 1,500 ಜಲ್ಲೆಗಳ ಖರೀದಿಸಿ ಟೆಂಪೊದಲ್ಲಿ ತಂದು ಬುಧವಾರ ಸಂಜೆ ಮತ್ತು ಗುರುವಾರ ಬೆಳಿಗ್ಗೆ ಕುಟುಂಬ ಸದಸ್ಯರೊಂದಿಗೆ ಹಂಚಿಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT