ಹರೂರು, ಮೊಗೇನಹಳ್ಳಿ, ಮಂಕುಂದ ಗ್ರಾಮದ ಜನರು ಸೇರಿ ಬಸಪ್ಪ ದೇವರ ಕೊಂಡ ಕಾರ್ಯಕ್ರಮ ಆಯೋಜಿಸಿದ್ದರು. ಮಂಕುಂದ ಗ್ರಾಮದವರಾದ ನಂದೀಶ್ ಮೊದಲ ಬಾರಿಗೆ ಕೊಂಡ ಹಾಯಲು ಹೋಗಿದ್ದು, ಈ ವೇಳೆ ಜಾರಿ ಬಿದ್ದರು. ಗಾಯಾಳುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.