<p><strong>ಚನ್ನಪಟ್ಟಣ</strong>: ತಾಲ್ಲೂಕಿನ ವಂದಾರಗುಪ್ಪೆ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಗ್ರಾಹಕರೊಬ್ಬರ ಖಾತೆಯಿಂದ ಸೈಬರ್ ವಂಚಕರು ₹5.95ಲಕ್ಷ ಆನ್ಲೈನ್ ಮೂಲಕ ಕಳವು ಮಾಡಿದ್ದಾರೆ. ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ.</p>.<p>ಗ್ರಾಮದ ಪಿಎಸಿಎಸ್ ಅಧ್ಯಕ್ಷ ವಿ.ಬಿ.ಚಂದ್ರಯ್ಯ ಅವರ ಖಾತೆಯಲ್ಲಿ ₹6.35ಲಕ್ಷ ಇತ್ತು. ಇದರಲ್ಲಿ ₹5.95 ಲಕ್ಷವನ್ನು ಯಾವುದೇ ಒಟಿಪಿ ಕೇಳದೆಯೇ ವಂಚಕರು ಕದ್ದಿದ್ದಾರೆ. ಅಷ್ಟೇ ಅಲ್ಲ; ಇಷ್ಟು ದೊಡ್ಡ ಮೊತ್ತ ಡೆಬಿಟ್ ಆದರೂ ಚಂದ್ರಯ್ಯ ಅವರ ಮೊಬೈಲ್ಗೆ ಯಾವುದೇ ಸಂದೇಶ ಬಂದಿಲ್ಲ.</p>.<p>ಸೋಮವಾರ ಬೆಳಗ್ಗೆ ಹಾಲಿನ ಹಣ ಬ್ಯಾಂಕ್ಗೆ ಹಾಕಲು ಹೋದಾಗ ಖಾತೆ ನಿಷ್ಕ್ರಿಯಗೊಂಡಿರುವುದು ಗೊತ್ತಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಹಣ ಖೋತಾ ಆಗಿರುವುದು ದೃಢಪಟ್ಟಿದೆ.</p>.<p>10 ನಿಮಿಷದಲ್ಲೇ ₹5.95ಲಕ್ಷ ಖೋತಾ: ಭಾನುವಾರ ತಡರಾತ್ರಿ 1:30 ರಿಂದ 1:40ರೊಳಗೆ ಐದು ಬಾರಿ ಹಣ ವರ್ಗಾವಣೆಯಾಗಿದೆ. ಕ್ರಮವಾಗಿ ₹50 ಸಾವಿರ, ₹45 ಸಾವಿರ, ₹2 ಲಕ್ಷ, ಮತ್ತೆ ₹2 ಲಕ್ಷ, ಮತ್ತೆ ₹1 ಲಕ್ಷ ಖೋತಾ ಆಗಿದೆ. ಕೇವಲ 10 ನಿಮಿಷದಲ್ಲಿ ಯುಪಿಐ ಮೂಲಕ ಈ ಹಣ ವರ್ಗಾವಣೆಯಾಗಿದೆ.</p>.<p>ಬ್ಯಾಂಕ್ ದಾಖಲೆಗಳ ಪರಿಶೀಲನೆಯಲ್ಲಿ ಆಂಧ್ರಪ್ರದೇಶದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಒಂದು ಕಡೆ 'ಜನರಲ್ ಸ್ಟೋರ್' ಎಂದೂ, ಮತ್ತೊಂದೆಡೆ 'ಹಾರ್ಡವೇರ್' ಎಂದೂ ನಮೂದಾಗಿದೆ.</p>.<p>ರಾಮನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-14-1562702765</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ತಾಲ್ಲೂಕಿನ ವಂದಾರಗುಪ್ಪೆ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಗ್ರಾಹಕರೊಬ್ಬರ ಖಾತೆಯಿಂದ ಸೈಬರ್ ವಂಚಕರು ₹5.95ಲಕ್ಷ ಆನ್ಲೈನ್ ಮೂಲಕ ಕಳವು ಮಾಡಿದ್ದಾರೆ. ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ.</p>.<p>ಗ್ರಾಮದ ಪಿಎಸಿಎಸ್ ಅಧ್ಯಕ್ಷ ವಿ.ಬಿ.ಚಂದ್ರಯ್ಯ ಅವರ ಖಾತೆಯಲ್ಲಿ ₹6.35ಲಕ್ಷ ಇತ್ತು. ಇದರಲ್ಲಿ ₹5.95 ಲಕ್ಷವನ್ನು ಯಾವುದೇ ಒಟಿಪಿ ಕೇಳದೆಯೇ ವಂಚಕರು ಕದ್ದಿದ್ದಾರೆ. ಅಷ್ಟೇ ಅಲ್ಲ; ಇಷ್ಟು ದೊಡ್ಡ ಮೊತ್ತ ಡೆಬಿಟ್ ಆದರೂ ಚಂದ್ರಯ್ಯ ಅವರ ಮೊಬೈಲ್ಗೆ ಯಾವುದೇ ಸಂದೇಶ ಬಂದಿಲ್ಲ.</p>.<p>ಸೋಮವಾರ ಬೆಳಗ್ಗೆ ಹಾಲಿನ ಹಣ ಬ್ಯಾಂಕ್ಗೆ ಹಾಕಲು ಹೋದಾಗ ಖಾತೆ ನಿಷ್ಕ್ರಿಯಗೊಂಡಿರುವುದು ಗೊತ್ತಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಹಣ ಖೋತಾ ಆಗಿರುವುದು ದೃಢಪಟ್ಟಿದೆ.</p>.<p>10 ನಿಮಿಷದಲ್ಲೇ ₹5.95ಲಕ್ಷ ಖೋತಾ: ಭಾನುವಾರ ತಡರಾತ್ರಿ 1:30 ರಿಂದ 1:40ರೊಳಗೆ ಐದು ಬಾರಿ ಹಣ ವರ್ಗಾವಣೆಯಾಗಿದೆ. ಕ್ರಮವಾಗಿ ₹50 ಸಾವಿರ, ₹45 ಸಾವಿರ, ₹2 ಲಕ್ಷ, ಮತ್ತೆ ₹2 ಲಕ್ಷ, ಮತ್ತೆ ₹1 ಲಕ್ಷ ಖೋತಾ ಆಗಿದೆ. ಕೇವಲ 10 ನಿಮಿಷದಲ್ಲಿ ಯುಪಿಐ ಮೂಲಕ ಈ ಹಣ ವರ್ಗಾವಣೆಯಾಗಿದೆ.</p>.<p>ಬ್ಯಾಂಕ್ ದಾಖಲೆಗಳ ಪರಿಶೀಲನೆಯಲ್ಲಿ ಆಂಧ್ರಪ್ರದೇಶದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಒಂದು ಕಡೆ 'ಜನರಲ್ ಸ್ಟೋರ್' ಎಂದೂ, ಮತ್ತೊಂದೆಡೆ 'ಹಾರ್ಡವೇರ್' ಎಂದೂ ನಮೂದಾಗಿದೆ.</p>.<p>ರಾಮನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260520-14-1562702765</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>