ಈ ವಿಶೇಷ ಅನುದಾನದಲ್ಲಿ ಶನಿವಾರ (ಅ.1) ತರಾತುರಿಯಲ್ಲಿ ಕಾಮಗಾರಿಗಳ ಆರಂಭಕ್ಕೆ ಭೂಮಿಪೂಜೆ ಏರ್ಪಡಿಸಿದ್ದು, ತಾಲ್ಲೂಕಿನ ರಾಂಪುರ, ಪಟ್ಲು, ಬೈರಾಪಟ್ಟಣ, ಅಕ್ಕೂರು ಹೊಸಹಳ್ಳಿ, ಕೋಡಂಬಹಳ್ಳಿ ಗ್ರಾಮಗಳಲ್ಲಿ ಕಾರ್ಯಕ್ರಮ ನಿಗದಿಯಾಗಿದೆ.ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಈ ಕಾರ್ಯಕ್ರಮಗಳ ಆಯೋಜನೆಯ ಉಸ್ತುವಾರಿ ವಹಿಸಿದ್ದಾರೆ.