ಜಿಲ್ಲಾ ಪಂಚಾಯಿತಿ ಲೆಕ್ಕ ಅಧೀಕ್ಷಕ ಗಂಗರಾಜು, ಲೆಕ್ಕ ಸಹಾಯಕ ಗಿರೀಶ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಿ.ಎ.ಮೋಹನ್ ಬಾಬು, ಲೆಕ್ಕ ಸಹಾಯಕ ರಾಜು ಅಧಿಕಾರಿಗಳ ತಂಡವು ಬುಧವಾರದಿಂದ ಪಂಚಾಯಿತಿಯಲ್ಲಿ ಲೆಕ್ಕ ಪರಿಶೋಧನೆಯನ್ನು ಪ್ರಾರಂಭಿಸಿದೆ. ತನಿಖೆ ವೇಳೆ ಪಂಚಾಯಿತಿ ಅಧ್ಯಕ್ಷೆ ಶೋಭಾ ರವಿಗೌಡ, ಉಪಾಧ್ಯಕ್ಷೆ ಸುಧಾ ನಾಗೇಶ್, ಪಿಡಿಒ ದಯಾನಂದ ಸಾಗರ್ ಉಪಸ್ಥಿತರಿದ್ದರು.