‘ಮಾರಕಾಸ್ತ್ರಗಳಿಂದ ಪುತ್ರರಾದ ಲೋಕನಾಥ್ ಸಿಂಗ್ ಮತ್ತು ಪೃಥ್ವಿಸಿಂಗ್ ಅವರ ಮೇಲೆ ಕಳ್ಳರ ತಂಡ ಮನಸೋಇಚ್ಛೆ ಹೊಡೆದು ಹಲ್ಲೆ ನಡೆಸಿತು. ಮನೆಯಲ್ಲಿದ್ದ ₹50 ಸಾವಿರ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ, ಲ್ಯಾಪ್ಟಾಪ್, ಮೊಬೈಲ್ ಫೋನ್, ಡಿಜೆರೊ ಕಾರು ಸಮೇತ ದೋಚಿಕೊಂಡು ಪರಾರಿಯಾದರು. ಬಾಯಿಗೆ ಅಂಟಿಸಿದ ಟೇಪು ಬಿಚ್ಚಿಕೊಂಡು ಮನೆ ಹೊರಗೆ ಬಂದ ಮಕ್ಕಳಿಬ್ಬರು ಕೂಗಾಡಿದರು. ನೆರೆಹೊರೆ ಜನರು ಬಂದು ರಕ್ಷಿಸಿದರು. ಈಗ ಪುತ್ರರಿಬ್ಬರು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಶಶಿಕಲಾ ತಿಳಿಸಿದರು.