ರಾಮನಗರ: ಈಗ ನಡೆದಿರುವ ಪಿಎಸ್ಐ ಹಗರಣದ ಜೊತೆಗೆಸಿದ್ದರಾಮಯ್ಯ ಕಾಲದ ಎಲ್ಲ ಹಗರಣಗಳ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಯಾವ್ಯಾವ ತನಿಖೆಗಳು ಹೇಗೇಗೆ ನಡೆದಿವೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯರ ಆಳ-ಅಗಲ ಎಲ್ಲವೂ ಗೊತ್ತಿದೆ ಎಂದು ಟೀಕಿಸಿದರು.