ವಿವಿಧ ರಾಜ್ಯಗಳಿಂದ ಇಲ್ಲಿ ರೇಷ್ಮೆ ಮಾರಾಟ ಮಾಡಲು ರೈತರು ಬರುತ್ತಾರೆ. ಈ ಮೊದಲು ರೇಷ್ಮೆ ಮಾರಾಟ ಮಾಡಿದ ರೈತರಿಗೆ ನೇರವಾಗಿ ನಗದು ನೀಡುತ್ತಿದ್ದರಿಂದ, ಬಂದಷ್ಟು ಹಣ ಪಡೆದು ರೈತರು ಖುಷಿಯಿಂದ ಮನೆಗೆ ಹೋಗುತ್ತಿದ್ದರು. ಆದರೆ ಈಗ ಆರ್ಟಿಜಿಎಸ್ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಬಂದಿದೆ. ಮೊದಲು ಬ್ಯಾಂಕ್ ಖಾತೆಗೆ 48 ಗಂಟೆ ಒಳಗಾಗಿ ಹಣ ವರ್ಗಾವಣೆಯಾಗುತ್ತಿತ್ತು. ಈಗ 15 ದಿನವಾದರೂ ಬರುತ್ತಿಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶ, ಹಾವೇರಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಗದಗ, ಮಂಡ್ಯ ಜಿಲ್ಲೆ ಸೇರಿ ವಿವಿಧ ಭಾಗಗಳಿಂದ ಗೂಡು ಮಾರಾಟ ಮಾಡಲು ಬಂದಿದ್ದಾರೆ. ಆದರೆ ಮೂರು ದಿನಗಳು ಕಳೆದರೂ ಹಣ ಸಿಗದೆ ಇಲ್ಲಿಯೇ ಉಳಿದುಕೊಂಡು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.