ವ್ಯಕ್ತಿಯು ಎಕಾಂತದಲ್ಲಿ ಕುಳಿತು ಸುಮ್ಮನೆ ಅಳುವುದು, ನಗುವುದು, ಭಾವನೆಗಳೇ ಇಲ್ಲದ ಹಾಗೆ ವರ್ತಿಸುವುದು, ಕಾಲ್ಪನಿಕ ಲೋಕದಲ್ಲಿ ಬದುಕುವುದು, ಅಸಂಬದ್ಧವಾದ ಪದಗಳನ್ನು ಬಳಸುವುದು, ಆತ್ಮಹತ್ಯೆಯಂತಹ ಕೃತ್ಯಗಳನ್ನು ಮಾಡುವುದು, ಇತರರನ್ನು ಕೊಲ್ಲಲು ಪ್ರಯತ್ನಿಸುವಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಲಕ್ಷಣಗಳು ಕಂಡು ಬಂದಲ್ಲಿ ಮೂಢನಂಬಿಕೆಗೆ ಒಳಗಾಗದೆ, ಮನೋವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.