ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಪ್ಪಗೊಂಡನಹಳ್ಳಿ ಜಲಾಶಯ ಹೂಳು ತೆಗೆಯಲು ಬಹುಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಹೆಸರಘಟ್ಟ, ನೆಲಮಂಗಲದ ಕೈಗಾರಿಕೆಗಳಿಂದ ಹರಿದು ಬರುವ ತ್ಯಾಜ್ಯದ ನೀರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರಿ ಕಲುಷಿತಗೊಳ್ಳುತ್ತಿದೆ. ಇದೇ ನೀರನ್ನು ಮಂಚನಬೆಲೆ ಜಲಾಶಯಕ್ಕೆ ತುಂಬಿಸಲಾಗುತ್ತಿದೆ. ಪಟ್ಟಣದ ಜನರಿಗೆ ಮಂಚನಬೆಲೆ ಜಲಾಶಯದ ನೀರು ಬಿಟ್ಟರೆ ಕುಡಿಯುವ ನೀರಿಗೆ ಬೇರೆ ಮಾರ್ಗವಿಲ್ಲ ಎಂದು ದೂರಿದರು.