ರಾಮನಗರದಲ್ಲಿ ಕಳೆದ ಮೂರು ದಿನಗಳಲ್ಲಿ ನೂರು ಮಿಲಿಮೀಟರ್ಗೂ ಹೆಚ್ಚು ಮಳೆ ಸುರಿದಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಮಣ್ಣು ಹಸಿಯಾದ ಕಾರಣ ರೈತರು ಉಳುಮೆ ಮಾಡಿಲ್ಲ. ಈಗಾಗಲೇ ಬೆಳೆದಿರುವ ಬೆಳೆಗಳೂ ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಗುರುವಾರ ರಾತ್ರಿ ಕನಕಪುರ ತಾಲ್ಲೂಕಿನಲ್ಲಿ ಸರಾಸರಿ 27 ಮಿ.ಮೀ. ಮಾಗಡಿಯಲ್ಲಿ 40 ಮಿ.ಮೀ, ಚನ್ನಪಟ್ಟಣದಲ್ಲಿ 17 ಹಾಗೂ ರಾಮನಗರದಲ್ಲಿ 46 ಮಿ.ಮೀ ಮಳೆ ಸುರಿದಿದೆ.