ಕಾಂಗ್ರೆಸ್ ಕಚೇರಿಯಿಂದ ನೂರು ಮೀಟರ್ ದೂರದಲ್ಲಿ ಇರುವ ಐಜೂರು ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ಗಳನ್ನು ಜೋಡಿಸಿದ ಪೊಲೀಸರು, ಜಲಫಿರಂಗಿ, ಅಶ್ರುವಾಯು ಸಿಡಿಸುವ ವಾಹನಗಳನ್ನೂ ತಂದು ನಿಲ್ಲಿಸಿದರು. ಡಿಐಜಿ ಲೋಕೇಶ್ಕುಮಾರ್ ಹಾಗೂ ರಾಮನಗರ ಎಸ್.ಪಿ ಗಿರೀಶ್ ಕಾಂಗ್ರೆಸ್ ಕಚೇರಿಗೆ ಧಾವಿಸಿ, ಪಾದಯಾತ್ರೆಯನ್ನು ತತ್ಕ್ಷಣದಿಂದಲೇ ಕೈ ಬಿಡಬೇಕು. ಇಲ್ಲವಾದರೆ ತಮ್ಮೆಲ್ಲರ ಬಂಧನ ಅನಿವಾರ್ಯ ಎಂಬ ಎಚ್ಚರಿಕೆ ನೀಡಿ ತೆರಳಿದ್ದರು.