ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ವೈರಲ್‌: ಮರ್ಯಾದೆಗೆ ಅಂಜಿ ದಂಪತಿ ನೇಣಿಗೆ

Last Updated 12 ಜೂನ್ 2019, 2:40 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಸಾದಾರಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಮಾರ್ಯಾದೆಗೆ ಅಂಜಿ ದಂಪತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಗ್ರಾಮದ ಲೋಕೇಶ್ (29) ಹಾಗೂ ಕೌಶಲ್ಯ (24) ನೇಣಿಗೆ ಶರಣಾದವರು. ಗ್ರಾಮದ ತ್ಯಾಗರಾಜ್ ಎಂಬಾತ ಕೌಶಲ್ಯ ಜೊತೆಗೆ ಇದ್ದ ಕೆಲವು ಭಾವಚಿತ್ರಗಳನ್ನು ಆಕೆಯ ಪತಿ ಲೋಕೇಶ್ ಹಾಗೂ ಗ್ರಾಮದ ಕೆಲವರ ಮೊಬೈಲ್ ಗೆ ಕಳುಹಿಸಿದ್ದ ಎಂದು ತಿಳಿದುಬಂದಿದ್ದು, ಈ ವಿಷಯ ಗ್ರಾಮದಲ್ಲಿ ಚರ್ಚೆಯಾಗುತ್ತಿತ್ತು. ಇದರಿಂದ ಅಂಜಿದ ದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ದಂಪತಿ ಸಾವಿಗೆ ತ್ಯಾಗರಾಜ ಕಾರಣ ಎಂಬ ವಿಷಯ ತಿಳಿದ ಗ್ರಾಮದ ಕೆಲವರು ರೊಚ್ಚಿಗೆದ್ದು, ಆತನ ಮನೆಗೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು, ಎರಡು ಕಾರು, ಒಂದು ಟ್ರ್ಯಾಕ್ಟರ್ ಸುಟ್ಟು ಕರಕಲಾಗಿವೆ. ಘಟನೆ ನಡೆದ ತಕ್ಷಣ ಮನೆಯಲ್ಲಿದ್ದವರು ಪರಾರಿಯಾಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.

ತ್ಯಾಗರಾಜನನ್ನು ಇಷ್ಟ ಪಟ್ಟಿದ್ದ ಕೌಶಲ್ಯ ಕೆಲವು ದಿನಗಳ ಹಿಂದೆ ಆತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಮತ್ತೆ ನಿನ್ನೆಯಷ್ಟೆ ಗ್ರಾಮಕ್ಕೆ ವಾಪಸಾಗಿದ್ದಳು ಎಂದು ತಿಳಿದುಬಂದಿದ್ದು, ತ್ಯಾಗರಾಜ ಆಕೆಯ ಜೊತೆಗಿದ್ದ ಭಾವಚಿತ್ರಗಳನ್ನು ಆಕೆಯ ಪತಿ ಹಾಗೂ ಗ್ರಾಮದ ಕೆಲವರ ಮೊಬೈಲ್ ಗೆ ಕಳುಹಿಸಿದ್ದೆ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತಾಲ್ಲೂಕಿನ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT