ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಗೋವುಗಳ ಜೊತೆಗೆ ಇತರ ಜಾನುವಾರುಗಳನ್ನೂ ಒಳಗೊಂಡು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೊಂಡಿದೆ. ಇದರ ಅನ್ವಯ ಗೋವಿನ ಜೊತೆಗೆ ಎಮ್ಮೆ, ಎತ್ತು ಸೇರಿದಂತೆ ಬೇರೆ ಜಾನುವಾರುಗಳನ್ನೂ ಕೊಲ್ಲುವಂತಿಲ್ಲ. ಈ ಹಿಂದೆ ಮೃಗಾಲಯಗಳ ಪ್ರಾಣಿಗಳಿಗೆ ಜಾನುವಾರು ಮಾಂಸ ಪೂರೈಸಲಾಗುತ್ತಿತ್ತು. ಕಾಯ್ದೆ ಜಾರಿಗೆ ಬಂದ ನಂತರ ತೊಂದರೆ ಆಗಿರುವ ಕುರಿತು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿಲ್ಲ. 13 ವರ್ಷ ಮೇಲಿನ ಎಮ್ಮೆ–ಕೋಣಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಒಪ್ಪಿಗೆ ಪತ್ರ ಪಡೆದು ವಧೆ ಮಾಡಬಹುದಾಗಿದೆ. ಆದರೆ ಗೋವುಗಳನ್ನು ಕೊಲ್ಲಲು ಅನುಮತಿ ಇಲ್ಲ’ ಎಂದರು.