ಮಾವ ಗಂಟಪ್ಪರವರು ಮಗ ಮತ್ತು ಸೊಸೆ ಮದುವೆ ಆದಾಗಿನಿಂದ ಮನೆಗೆ ಸೇರಿಸಿಕೊಳ್ಳದೇ ಹೊರ ಹಾಕಿದ್ದು, ಅವಮಾನಕರವಾಗಿ ನಡೆದುಕೊಂಡಿದ್ದರು. ಅಲ್ಲದೆ, ಯಾವುದೇ ಆಸ್ತಿ ಮತ್ತು ಹಣ, ಒಡವೆಗಳನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಚೈತ್ರಾ, ನವೀನ್ನೊಂದಿಗೆ ಸೇರಿ ಗಂಟಪ್ಪನ ಕೊಲೆಗೆ ಒಳಸಂಚು ನಡೆಸಿದರು. ಇದಕ್ಕಾಗಿ ನವೀನ್ಗೆ 30 ಗ್ರಾಂ ಚಿನ್ನದ ಸರ ನೀಡಿದ್ದ ಚೈತ್ರಾ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ.