<p><strong>ಕನಕಪುರ</strong>: ನಾಗಮೋಹನ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಹಿತ ರಕ್ಷಣಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ನಾಗಮೋಹನ ದಾಸ್ ವರದಿ ಜಾರಿಯಿಂದ ದಲಿತ ಸಮುದಾಯದ ಎರಡೂ ಪಂಗಡಗಳಿಗೂ ಯಾವುದೇ ಲಾಭವಿಲ್ಲ. ಬದಲಾಗಿ ಘರ್ಷಣೆ ಉಂಟಾಗಲಿದೆ. ಒಳ ಮೀಸಲಾತಿ ಹೆಸರಲ್ಲಿ ಹೊಲೆಯ ಮತ್ತು ಮಾದಿಗರ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.</p>.<p>ನಂತರ ನಾಗಮೋಹನ ದಾಸ್ ವರದಿ ತಿರಸ್ಕರಿಸುವಂತೆ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ಹೊಲಯ ಮತ್ತು ಮಾದಿಗ ಶೋಷಿತ ಹಾಗೂ ತುಳಿತಕ್ಕೆ ಒಳಗಾದ ಸಮುದಾಯಗಳ ನಡುವೆ ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಒಳ ಮೀಸಲಾತಿ ಹೆಸರಿನಲ್ಲಿ ದೊಡ್ಡ ಕಂದಕ ಸೃಷ್ಟಿ, ಎರಡು ಸಮುದಾಯಗಳನ್ನು ಬೇರ್ಪಡಿಸಿ ಶಕ್ತಿ ಕುಂದಿಸುವ ಕುತಂತ್ರ ಮಾಡುತ್ತಿವೆ. ಇದು ತುಂಬಾ ಅಪಾಯಕಾರಿ ನಡೆ. ಇದರ ವಿರುದ್ಧ ಎರಡು ಸಮುದಾಯಗಳು ಜಾಗೃತವಾಗಿ ಹೋರಾಡ ಬೇಕಿದೆ ಎಂದು ಪ್ರತಿಭಟನಕಾರರಾದ ಮಲ್ಲಿಕಾರ್ಜುನ್, ಎಸ್.ಎಸ್.ಡಿ. ಗೋವಿಂದಯ್ಯ, ಹಾರೋಹಳ್ಳಿ ಕೋಟೆ ಕುಮಾರ್, ಚನ್ನಪಟ್ಟಣ ಪ್ರದೀಪ್, ಬಿಡದಿ ದಿನೇಶ್ ಹೇಳಿದರು.</p>.<p>ಸಾತನೂರು ಶಿವಮಾದು, ಡಿ.ಕೆ.ಭರತ್ ಕುಮಾರ್, ಕಲ್ಬಾಳ್ ಲಕ್ಷ್ಮಣ್, ವಿ.ಎಸ್. ನವೀನ್ ಮೌರ್ಯ, ಶಿವರಾಜು, ತಾಮಸಂದ್ರ ಸತೀಶ್, ಸುನಿಲ್, ಏರಿದ್ಯಾಪನಹಳ್ಳಿ ಕೆಂಪಯ್ಯ, ಹೌಸಿಂಗ್ ಬೋರ್ಡ್ ನವೀನ್, ಸಾತನೂರು ಮಹದೇವ್, ಗೌರಮ್ಮ, ಪ್ರೇಮ, ಶಾಮಲಾ, ಸುಮಲತಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ನಾಗಮೋಹನ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಹಿತ ರಕ್ಷಣಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.</p>.<p>ನಾಗಮೋಹನ ದಾಸ್ ವರದಿ ಜಾರಿಯಿಂದ ದಲಿತ ಸಮುದಾಯದ ಎರಡೂ ಪಂಗಡಗಳಿಗೂ ಯಾವುದೇ ಲಾಭವಿಲ್ಲ. ಬದಲಾಗಿ ಘರ್ಷಣೆ ಉಂಟಾಗಲಿದೆ. ಒಳ ಮೀಸಲಾತಿ ಹೆಸರಲ್ಲಿ ಹೊಲೆಯ ಮತ್ತು ಮಾದಿಗರ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.</p>.<p>ನಂತರ ನಾಗಮೋಹನ ದಾಸ್ ವರದಿ ತಿರಸ್ಕರಿಸುವಂತೆ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ಹೊಲಯ ಮತ್ತು ಮಾದಿಗ ಶೋಷಿತ ಹಾಗೂ ತುಳಿತಕ್ಕೆ ಒಳಗಾದ ಸಮುದಾಯಗಳ ನಡುವೆ ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಒಳ ಮೀಸಲಾತಿ ಹೆಸರಿನಲ್ಲಿ ದೊಡ್ಡ ಕಂದಕ ಸೃಷ್ಟಿ, ಎರಡು ಸಮುದಾಯಗಳನ್ನು ಬೇರ್ಪಡಿಸಿ ಶಕ್ತಿ ಕುಂದಿಸುವ ಕುತಂತ್ರ ಮಾಡುತ್ತಿವೆ. ಇದು ತುಂಬಾ ಅಪಾಯಕಾರಿ ನಡೆ. ಇದರ ವಿರುದ್ಧ ಎರಡು ಸಮುದಾಯಗಳು ಜಾಗೃತವಾಗಿ ಹೋರಾಡ ಬೇಕಿದೆ ಎಂದು ಪ್ರತಿಭಟನಕಾರರಾದ ಮಲ್ಲಿಕಾರ್ಜುನ್, ಎಸ್.ಎಸ್.ಡಿ. ಗೋವಿಂದಯ್ಯ, ಹಾರೋಹಳ್ಳಿ ಕೋಟೆ ಕುಮಾರ್, ಚನ್ನಪಟ್ಟಣ ಪ್ರದೀಪ್, ಬಿಡದಿ ದಿನೇಶ್ ಹೇಳಿದರು.</p>.<p>ಸಾತನೂರು ಶಿವಮಾದು, ಡಿ.ಕೆ.ಭರತ್ ಕುಮಾರ್, ಕಲ್ಬಾಳ್ ಲಕ್ಷ್ಮಣ್, ವಿ.ಎಸ್. ನವೀನ್ ಮೌರ್ಯ, ಶಿವರಾಜು, ತಾಮಸಂದ್ರ ಸತೀಶ್, ಸುನಿಲ್, ಏರಿದ್ಯಾಪನಹಳ್ಳಿ ಕೆಂಪಯ್ಯ, ಹೌಸಿಂಗ್ ಬೋರ್ಡ್ ನವೀನ್, ಸಾತನೂರು ಮಹದೇವ್, ಗೌರಮ್ಮ, ಪ್ರೇಮ, ಶಾಮಲಾ, ಸುಮಲತಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>