ಚನ್ನಪಟ್ಟಣ: ಮಹದೇಶ್ವರ ನಗರದ ಬಳಿಯ ಬಯಲಿನಲ್ಲಿ ವಾಸವಿದ್ದ ಬಳ್ಳಾರಿ ಮೂಲದ ಕೂಲಿಕಾರ್ಮಿಕ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಶನಿವಾರ ತಾಲ್ಲೂಕು ಆಡಳಿತ ಹಾಗೂ ಪೊಲೀಸರು ಬಳ್ಳಾರಿಗೆ ಕಳುಹಿಸಿಕೊಟ್ಟರು.
ಮಹಾಲಕ್ಷ್ಮಿ (32) ಮೃತಪಟ್ಟವರು. ಅವರು ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲ್ಲೂಕಿನ ಶಾನವಾನಪುರ ಗ್ರಾಮದವರು. ಎರಡು ವರ್ಷಗಳ ಹಿಂದೆ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರ ಜತೆ ಬಂದಿದ್ದ ಅವರು ಮಹದೇಶ್ವರ ನಗರದಲ್ಲಿ ನೆಲೆಸಿದ್ದರು.
ತಾಲ್ಲೂಕು ಆರೋಗ್ಯಾಧಿಕಾರಿ ರಾಜು ಮರಣೋತ್ತರ ಪರೀಕ್ಷೆ ನಡೆಸಿ ಹೃದಯಾಘಾತದಿಂದ ಸಾವನ್ನಪ್ಪಿರುವ ವಿಷಯ ಖಚಿತಪಡಿಸಿದರು. ನಂತರ ತಹಶೀಲ್ದಾರ್ ಸುದರ್ಶನ್ ಅವರ ಶಿಫಾರಸಿನ ಮೇರೆಗೆ ಜಿಲ್ಲಾಡಳಿತದ ಒಪ್ಪಿಗೆ ಪಡೆದು ಪೊಲೀಸರ ಸಹಕಾರದೊಂದಿಗೆ ಮೃತದೇಹ ಕಳುಹಿಸಿ ಕೊಡಲಾಯಿತು.