ಗ್ರಾಮದಲ್ಲಿ ಮರಗಳನ್ನು ಕತ್ತರಿಸಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರಗಳನ್ನು ಕತ್ತರಿಸದೆ ರಸ್ತೆ ದುರಸ್ತಿ ಮಾಡಿಸಬಹುದಿತ್ತು. ವಿವೇಚನೆ ಇಲ್ಲದ ಅಧಿಕಾರಿಗಳು ಪರಿಸರ ರಕ್ಷಿಸುವ ಬದಲು ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.