ಹುಲಿಕೆರೆ ಪಶುವೈದ್ಯ ಆಸ್ಪತ್ರೆಯ ಡಾ. ನಾಗೇಶ್ ಮಾತನಾಡಿ, ‘ಗುನ್ನೂರು 8, ಹುಲಿಕೆರೆ 14, ಕೋಟಹಳ್ಳಿ 4 ರಾಸುಗಳಿಗೆ ಚರ್ಮಗಂಟು ರೋಗ ಅಂಟಿದೆ. ನಾಲ್ಕೈದು ರಾಸುಗಳು ಹೆಚ್ಚಿನ ಪ್ರಮಾಣದ ರೋಗಕ್ಕೆ ತುತ್ತಾಗಿವೆ ಈಗಾಗಲೇ ಸೂಕ್ತ ಚಿಕಿತ್ಸೆ ರಾಸುಗಳಿಗೆ ನೀಡಲಾಗಿದ್ದು ಹಲವು ರಾಸುಗಳು ರೋಗದಿಂದ ಪಾರಾಗಿವೆ. ಕಾಲು ಊತ, ಗುಂಡಿಗೆ, ಚಪ್ಪೆ ಊತ, ರಾಸುಗಳ ಮೈಮೇಲೆ ಗುಳ್ಳೆಗಳು, ಗಾಯಗಳು, ವಿಪರೀತ ಜ್ವರ, ಜೊಲ್ಲು ಸುರಿಸುವುದು, ಮೇವು ಬಿಡುವುದು, ನಿತ್ರಾಣಗೊಳ್ಳುವುದು ಚರ್ಮಗಂಟು ರೋಗದ ಲಕ್ಷಣವಾಗಿವೆ. ರೈತರು ರೋಗಪೀಡಿತ ರಾಸುಗಳನ್ನು ಬೇರೆಡೆ ಕಟ್ಟಬೇಕು ಸೊಳ್ಳೆಗಳಿಂದ ಹರಡುವ ವೈರಾಣು ರೋಗವಾಗಿರುವ ಕಾರಣ ಸೊಳ್ಳೆಗಳು ರಾಸುಗಳಿಗೆ ಕಚ್ಚದಂತೆ ಕೊಟ್ಟಿಗೆಯಲ್ಲಿ ಸೊಳ್ಳೆಪರದೆ ರಕ್ಷಣೆ ಜಾನುವಾರುಗಳಿಗೆ ಕೊಡಬೇಕು. ಪ್ರತಿದಿನ ರಾಸುಗಳನ್ನು ತೊಳೆದು ಶುಚಿತ್ವಗೊಳಿಸಿ ಅವುಗಳ ತಪಾಸಣೆ ವೈದ್ಯರಿಂದ ಮಾಡಿಸಬೇಕು ಎಂದರು.