ಕೋಟೆಯೊಳಗಿನ ಕಾಶಿವಿಶ್ವೇಶ್ವರಸ್ವಾಮಿ ಶಿಥಿಲ ಗುಡಿ, ವೀರಗಲ್ಲುಗಳು, ಬಿದಿರ ಕಟ್ಟೆ ಇತರೆ ಸ್ಮಾರಕಗಳನ್ನು ರಕ್ಷಿಸಿ, ಅಭಿವೃದ್ಧಿ ಪಡಿಸಲು ಯೋಜನೆ ತಯಾರಿಸಲಾಗಿದೆ. ಚಾರಣಿಗರಿಗೆ ಅನುಕೂಲ ಮಾಡಿಕೊಡಲಾಗುವುದು. ಶಿಥಿಲವಾಗಿರುವ ಪ್ರವಾಸಿ ಮಂದಿರವನ್ನು ದುರಸ್ತಿಪಡಿಸಲಾಗುವುದು. ಮಂಚನಬೆಲೆ, ಮಾಗಡಿ, ಕಲ್ಯಾ, ತಿಪ್ಪಗೊಂಡನಹಳ್ಳಿ ಜಲಾಶಯಗಳನ್ನು ನೋಡಲು ಒಂದು ದಿನದ ಪ್ಯಾಕೇಜ್ ರೂಪಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.