ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಯಮುತ್ತು ಅವರಿಗೆ ಮಾಹಿತಿ ಕೊರತೆಯೋ, ಶಿಕ್ಷಣದ ಕೊರತೆಯೋ, ಅನುಭವದ ಕೊರತೆಯೋ ತಿಳಿಯುತ್ತಿಲ್ಲ. ಎಲ್ಲೆಡೆ ರೌಡಿಸಂ ಸಂಸ್ಕೃತಿ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ನನ್ನ ಕಾರಿನ ಮೇಲೆ ಕಲ್ಲು, ಮೊಟ್ಟೆ ಹೊಡೆಸಿದ್ದರು’ ಎಂದು ಆರೋಪಿಸಿದರು.
ಜಯಮುತ್ತು ಅವರಿಗೆ ನಿಜವಾಗಲೂ ಹಾಲು ಉತ್ಪಾದಕ ರೈತರ ಮೇಲೆ ಕಾಳಜಿ ಇದ್ದಿದ್ದರೆ ನಾಮಿನಿ ನಿರ್ದೇಶಕರನ್ನು ಹೂಗುಚ್ಛ ನೀಡಿ ಸ್ವಾಗತಿಸಿ, ಇಬ್ಬರೂ ಸೇರಿಕೊಂಡು ರೈತರ ಅಭಿವೃದ್ಧಿ ಮಾಡೋಣ ಎನ್ನಬಹುದಿತ್ತು. ಆದರೆ, ಅಧಿಕಾರ ಸ್ವೀಕರಿಸಲು ಬಂದ ನಾಮಿನಿ ನಿರ್ದೇಶಕ ಮೇಲೆ ತಮ್ಮ ಬೆಂಬಲಿಗರನ್ನು ಕರೆತಂದು ಗಲಾಟೆ ಮಾಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ
ಎಂದರು.