"ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1,500 ಹಾಸಿಗೆಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಅಲ್ಲೇ ಆರೋಪಿಗಳನ್ನು ಕ್ವಾರಂಟೈನ್ ಮಾಡಬಹುದಿತ್ತು, ಇಲ್ಲವಾದರೆ ಬೇರೆ ಕಡೆಯಲ್ಲಿ ಇರಿಸಬಹುದಿತ್ತು. ಇಲ್ಲವಾದರೆ ಯಾವುದಾದರೂ ಕಲ್ಯಾಣ ಮಂಟಪದಲ್ಲಿ ಇರಿಸಬಹುದಿತ್ತು. ರಾಮನಗರಕ್ಕೆ ಸ್ಥಳಾಂತರಿಸಿ, ಈಗ ಐವರಲ್ಲಿ ಸೋಂಕು ಧೃಡಪಟ್ಟ ಬಳಿಕ ಇಲ್ಲಿಂದ ಮತ್ತೆ ಸ್ಥಳಾಂತರ ಮಾಡಿದ್ದನ್ನು ನೋಡಿದರೆ ಇದೊಂದು ರೀತಿಯ ಹುಡುಗಾಟ ಆಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು. ಇದು ರಾಜಕೀಯ ಮಾಡುವ ಸಮಯವಲ್ಲ, ರಾಜಕೀಯ ಮಾಡಲು ಮುಂದೆ ಸಮಯವಿದೆ. ಇಂತಹ ಸನ್ನಿವೇಶದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದರು.