ರಾಮನಗರ: ನಗರದಲ್ಲಿ ಈಚೆಗೆ ಮ್ಯಾನ್ಹೋಲ್ನಲ್ಲಿ ಬಿದ್ದು ಮೃತಪಟ್ಟ ರಮೇಶ್ ಎಂಬ ವ್ಯಕ್ತಿಯ ಕುಟುಂಬದವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ₹ 10 ಲಕ್ಷದ ಚೆಕ್ ವಿತರಿಸಿದರು.
ರಮೇಶ್ ಅವರ ಪತ್ನಿಗೆ ₹ 2.5 ಲಕ್ಷ, ತಾಯಿಗೆ ₹ 2.5 ಲಕ್ಷ ಹಾಗೂ ಅವರ ಮಗಳ ಹೆಸರಿನಲ್ಲಿ ₹ 5 ಲಕ್ಷ ನಿಶ್ಚಿತ ಠೇವಣಿ ಮಾಡಲಾಗಿದೆ. ಮಗಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಹಣ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಮನಗರ ನಗರಸಭೆ ಪೌರಾಯುಕ್ತ ನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಲಲಿತಾ ಉಪಸ್ಥಿತರಿದ್ದರು.