ಚನ್ನಪಟ್ಟಣ: ತಾಲ್ಲೂಕಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದ ಅನ್ನ ದಾಸೋಹಕ್ಕೆ ದಿನಸಿ ಹಾಗೂ ತರಕಾರಿ ನೀಡುವ ಮೂಲಕ ನಟ ದರ್ಶನ್ ಅವರ 45ನೇ ಜನ್ಮದಿನವನ್ನು ಬುಧವಾರ ಆಚರಿಸಿದರು.
ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹಕ್ಕೆ ದಿನಸಿ ಹಾಗೂ ತರಕಾರಿಗಳನ್ನು ನೀಡಿ ತಮ್ಮ ನೆಚ್ಚಿನ ನಟನ ಆರೋಗ್ಯ ಭಾಗ್ಯಕ್ಕೆ ಪ್ರಾರ್ಥಿಸಿದರು.
ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಮಾತನಾಡಿ, ನಟ ದರ್ಶನ್ ಕನ್ನಡ ಚಿತ್ರರಂಗದ ಅದ್ಭುತ ನಟ. ನಟನೆಯ ಜೊತೆಗೆ ಸಾಮಾಜಿಕ ತುಡಿತ ಹೊಂದಿರುವ ಅವರದ್ದು ಮೇರು ವ್ಯಕ್ತಿತ್ವ. ಅವರ ಸಾಮಾಜಿಕ ಕಳಕಳಿಯ ವ್ಯಕ್ತಿತ್ವವೇ ಅವರ ಬೆಳವಣಿಗೆಗೆ ಮೂಲ ಕಾರಣ. ಅವರ ಅಭಿಮಾನಿಗಳು ಸಹ ಅವರದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಛಾಯಾಪ್ರಸಾದ್, ಪದಾಧಿಕಾರಿಗಳಾದ ಪ್ರಪುಲ್ಲ, ಮಂಜೇಶ್, ಪವನ್, ಶಿವು, ಯೋಗಿ, ವಿಕಾಶ್ ಹಾಜರಿದ್ದರು.