<p><strong>ರಾಮನಗರ</strong>: ‘ನನಗೆ ಒಂದೇ ಒಂದು ಆಸೆ. ನಮ್ಮಣ್ಣ ಮುಖ್ಯಮಂತ್ರಿ ಆಗಬೇಕು...’ – ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಸಂದರ್ಶನವೊಂದರಲ್ಲಿ ಭಾವುಕರಾಗಿ ಹೇಳಿರುವ ಈ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಶಿವಕುಮಾರ್ ಅವರು ‘ಕನಕಪುರದ ಬಂಡೆ’ ಎಂದೇ ಜನಪ್ರಿಯವಾಗಿದ್ದರೆ, ಸದಾ ಅವರ ಬೆನ್ನಿಗಿರುವ ಸುರೇಶ್ ಅವರನ್ನು ‘ಹೆಬ್ಬಂಡೆ’ ಎಂದು ಅವರ ಬೆಂಬಲಿಗರು ಕರೆಯುತ್ತಾರೆ. ಅಣ್ಣನ ರಾಜಕೀಯದ ಪ್ರತಿ ಹೆಜ್ಜೆಗೆ ಹೆಜ್ಜೆಯಾಗಿ ನಿಲ್ಲುತ್ತಾ ಬಂದಿರುವ ಸುರೇಶ್ ಅವರು, ಶಿವಕುಮಾರ್ ಅವರ ಹಿಂದಿರುವ ದೊಡ್ಡ ಶಕ್ತಿ.</p>.<p>ಕೃಷಿ, ಬಿಸಿನೆಸ್ ಹಾಗೂ ಇತರ ವ್ಯವಹಾರಗಳನ್ನು ನೋಡಿಕೊಂಡಿದ್ದ ಸುರೇಶ್, ಅಣ್ಣನ ಪ್ರತಿ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಗೆಲುವಿನ ದಡ ಸೇರಿಸುತ್ತಿದ್ದ ತಳಮಟ್ಟದ ಸಂಘಟಕ. ಹಳ್ಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಸುರೇಶ್ ಅವರ ಸಂಘಟನಾ ಚತುರತೆಗೆ ಸಾಕ್ಷಿ.</p>.<p>‘ರಾಜಕಾರಣ ಸೇರಿದಂತೆ ಅಧಿಕಾರಕ್ಕಾಗಿ ಸಹೋದರರು ಕಿತ್ತಾಡಿಕೊಂಡಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಆದರೆ ರಾಜ್ಯ ರಾಜಕಾರಣದಲ್ಲಿ ‘ಅಪೂರ್ವ ಸಹೋದರರು’ ಎಂದೇ ಕರೆಯಲಾಗುವ ಡಿ.ಕೆ. ಸಹೋದರರ ನಡುವೆ ಅಂತಹ ಯಾವುದೇ ಸಣ್ಣ ವೈಮನಸ್ಸು ಕೂಡ ಇಲ್ಲ. ಅಷ್ಟೊಂದು ಅವಿನಾಭಾವ ಸಂಬಂಧ ಅವರದ್ದು’ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಸಹೋದರರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.</p>.<p>‘ಜಿಲ್ಲೆಯ ಪ್ರತಿ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿಶೇಷ. ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ, ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು ಬಿಟ್ಟರೆ, ಉಳಿದೆಡೆ ಸದಾ ಜೊತೆಗಿರುತ್ತಾರೆ. ಜಿಲ್ಲೆಯ ಆಡಳಿತದಲ್ಲೂ ಅವರದ್ದು ಪ್ರಮುಖ ಪಾತ್ರ’ ಎಂದು ಹೇಳಿದರು.</p>.<p>‘ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಶಿವಕುಮಾರ್ ಅವರು ತಿಹಾರ್ ಜೈಲು ಸೇರಿದ್ದಾಗಲೂ, ಅಣ್ಣನಿಗೆ ಆತ್ಮವಿಶ್ವಾಸ ತುಂಬುತ್ತಾ 48 ದಿನಗಳಲ್ಲಿ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ಸುರೇಶ್ ಅವರು ಹಾಕಿದ್ದ ಶ್ರಮ ದೊಡ್ಡದು’ ಎಂದು ತಿಳಿಸಿದರು.</p>.<h3><strong>ಅಣ್ಣನ ಪರ ಗಟ್ಟಿ ದನಿ: </strong></h3>.<p>ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ, ಶಿವಕುಮಾರ್ ಪರವಾಗಿ ಸುರೇಶ ಗಟ್ಟಿಯಾಗಿ ದನಿ ಎತ್ತುತ್ತಾ ಬಂದಿದ್ದಾರೆ. ಸಂದರ್ಭ ಬಂದಾಗಲೆಲ್ಲಾ ದೆಹಲಿಗೆ ತೆರಳಿ, ಪಕ್ಷದ ನಾಯಕರ ಬಳಿ ಸಹೋದರನ ಪರವಾಗಿ ಸಿ.ಎಂ ಸ್ಥಾನದ ಹಕ್ಕು ಪ್ರತಿಪಾದನೆ ಮಾಡಿ ಬಂದಿದ್ದರು.</p>.<p>ಕಡೆಗೂ ಸುರೇಶ್ ಅವರು ಸಂದರ್ಶನದಲ್ಲಿ ತೋಡಿಕೊಂಡಿರುವ ತಮ್ಮ ಆಸೆಯಂತೆ, ಅಣ್ಣನನ್ನು ಮುಖ್ಯಮಂತ್ರಿಯಾಗಿ ನೋಡುವ ಕಾಲ ಕೂಡಿ ಬಂದಿದೆ. ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಇದೀಗ ಕ್ಷಣಗಣನೆ ಶುರುವಾಗಿದೆ.</p>.<h3><strong>ರಾಜಕಾರಣಕ್ಕೆ ಕರೆತಂದ ಅಣ್ಣ:</strong></h3>.<p>2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಎದುರಾದ ಉಪ ಚುನಾವಣೆಗೆ ಶಿವಕುಮಾರ್ ಅವರು ಸುರೇಶ್ ಅವರನ್ನು ನಿಲ್ಲಿಸಿದರು. ಇದರೊಂದಿಗೆ ಸುರೇಶ್ ರಾಜಕಾರಣ ಪ್ರವೇಶಿಸಿದರು.</p>.<p>ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಸುರೇಶ್ ಬರೋಬ್ಬರಿ 1.37 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರು. ಅದುವರೆಗೆ ಕನಕಪುರಕ್ಕೆ ಸೀಮಿತವಾಗಿದ್ದ ಸುರೇಶ್, ಜಿಲ್ಲೆ ಜೊತೆಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಕ್ಷದೊಳಗೆ ತಮ್ಮ ಹಿಡಿತ ಸಾಧಿಸಿದರು. ಸ್ಥಳೀಯ ಆಡಳಿತ ಸಂಸ್ಥೆಗಳಿಂದಿಡಿದು ಸಹಕಾರ ಕ್ಷೇತ್ರದ ಚುನಾವಣೆಗಳಲ್ಲೂ ಸುರೇಶ್ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಾ ಪಕ್ಷ ಸಂಘಟಿಸುತ್ತಿದ್ದಾರೆ. ಕಾರ್ಯಕರ್ತರ ಮನೆ ಕಾರ್ಯಕ್ರಮಗಳಿಗೆ ತಪ್ಪದೆ ಭೇಟಿ ನೀಡುವುದು ಅವರ ವಿಶೇಷತೆ.</p>.<h3><strong>ಸುರೇಶ್ ಮಗನಿದ್ದಂತೆ ಎಂದಿದ್ದ ಡಿಕೆಶಿ!</strong></h3>.<p>ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ವೀಕೆಂಡ್ ವಿತ್ ರಮೇಶ್’ ಎಂಬ ಜನಪ್ರಿಯ ಷೋದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಆಗ ಪ್ರಶ್ನೆಯೊಂದಕ್ಕೆ ಅವರು ‘ಡಿ.ಕೆ. ಸುರೇಶ್ ತಮ್ಮನಾದರೂ ನನಗೆ ಮಗನಿದ್ದಂತೆ’ ಎಂದಿದ್ದರು. ಇದು ಅವರಿಗೆ ಸಹೋದರನ ಮೇಲಿನ ತಮ್ಮ ಅಕ್ಕರೆಗೆ ಸಾಕ್ಷಿಯಾಗಿತ್ತು. ಜಿಲ್ಲೆಯಲ್ಲಿ ರಾಜಕೀಯವಾಗಿ ಸೇರಿದಂತೆ ಎಂತಹದ್ದೇ ವಿಷಯಗಳ ಕುರಿತ ತೀರ್ಮಾನಗಳನ್ನು ಶಿವಕುಮಾರ್ ಅವರು ಸುರೇಶ್ ಅವರಿಗೆ ಬಿಟ್ಟಿದ್ದಾರೆ.</p>.<h3><strong>ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ! </strong></h3>.<p>ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬಂದಾಗಲೆಲ್ಲಾ ಸುರೇಶ್ ಅವರು ‘ನಿಧಾನವಾದರೂ ಸಿದ್ದರಾಮಯ್ಯ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬ ಭರವಸೆ ನನಗಿದೆ’ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದರು. ಮುಖ್ಯಮಂತ್ರಿ ಬದಲಾವಣೆ ನಿರ್ಧಾರ ಹೊರ ಬೀಳುವುದಕ್ಕೆ ಮುಂಚೆ ನಾಲ್ಕೈದು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಸುರೇಶ್ ಅವರು ಹೈಕಮಾಂಡ್ ಹಂತದಲ್ಲಿ ಅಣ್ಣನ ಪರವಾಗಿ ವಕಾಲತ್ತು ವಹಿಸಿ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ದಪಡಿಸಿದ್ದರು ಎನ್ನುತ್ತಾರೆ ಅವರ ಆಪ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ‘ನನಗೆ ಒಂದೇ ಒಂದು ಆಸೆ. ನಮ್ಮಣ್ಣ ಮುಖ್ಯಮಂತ್ರಿ ಆಗಬೇಕು...’ – ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಸಂದರ್ಶನವೊಂದರಲ್ಲಿ ಭಾವುಕರಾಗಿ ಹೇಳಿರುವ ಈ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.</p>.<p>ಶಿವಕುಮಾರ್ ಅವರು ‘ಕನಕಪುರದ ಬಂಡೆ’ ಎಂದೇ ಜನಪ್ರಿಯವಾಗಿದ್ದರೆ, ಸದಾ ಅವರ ಬೆನ್ನಿಗಿರುವ ಸುರೇಶ್ ಅವರನ್ನು ‘ಹೆಬ್ಬಂಡೆ’ ಎಂದು ಅವರ ಬೆಂಬಲಿಗರು ಕರೆಯುತ್ತಾರೆ. ಅಣ್ಣನ ರಾಜಕೀಯದ ಪ್ರತಿ ಹೆಜ್ಜೆಗೆ ಹೆಜ್ಜೆಯಾಗಿ ನಿಲ್ಲುತ್ತಾ ಬಂದಿರುವ ಸುರೇಶ್ ಅವರು, ಶಿವಕುಮಾರ್ ಅವರ ಹಿಂದಿರುವ ದೊಡ್ಡ ಶಕ್ತಿ.</p>.<p>ಕೃಷಿ, ಬಿಸಿನೆಸ್ ಹಾಗೂ ಇತರ ವ್ಯವಹಾರಗಳನ್ನು ನೋಡಿಕೊಂಡಿದ್ದ ಸುರೇಶ್, ಅಣ್ಣನ ಪ್ರತಿ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಗೆಲುವಿನ ದಡ ಸೇರಿಸುತ್ತಿದ್ದ ತಳಮಟ್ಟದ ಸಂಘಟಕ. ಹಳ್ಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಸುರೇಶ್ ಅವರ ಸಂಘಟನಾ ಚತುರತೆಗೆ ಸಾಕ್ಷಿ.</p>.<p>‘ರಾಜಕಾರಣ ಸೇರಿದಂತೆ ಅಧಿಕಾರಕ್ಕಾಗಿ ಸಹೋದರರು ಕಿತ್ತಾಡಿಕೊಂಡಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಆದರೆ ರಾಜ್ಯ ರಾಜಕಾರಣದಲ್ಲಿ ‘ಅಪೂರ್ವ ಸಹೋದರರು’ ಎಂದೇ ಕರೆಯಲಾಗುವ ಡಿ.ಕೆ. ಸಹೋದರರ ನಡುವೆ ಅಂತಹ ಯಾವುದೇ ಸಣ್ಣ ವೈಮನಸ್ಸು ಕೂಡ ಇಲ್ಲ. ಅಷ್ಟೊಂದು ಅವಿನಾಭಾವ ಸಂಬಂಧ ಅವರದ್ದು’ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಸಹೋದರರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.</p>.<p>‘ಜಿಲ್ಲೆಯ ಪ್ರತಿ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿಶೇಷ. ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ, ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು ಬಿಟ್ಟರೆ, ಉಳಿದೆಡೆ ಸದಾ ಜೊತೆಗಿರುತ್ತಾರೆ. ಜಿಲ್ಲೆಯ ಆಡಳಿತದಲ್ಲೂ ಅವರದ್ದು ಪ್ರಮುಖ ಪಾತ್ರ’ ಎಂದು ಹೇಳಿದರು.</p>.<p>‘ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಶಿವಕುಮಾರ್ ಅವರು ತಿಹಾರ್ ಜೈಲು ಸೇರಿದ್ದಾಗಲೂ, ಅಣ್ಣನಿಗೆ ಆತ್ಮವಿಶ್ವಾಸ ತುಂಬುತ್ತಾ 48 ದಿನಗಳಲ್ಲಿ ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ಸುರೇಶ್ ಅವರು ಹಾಕಿದ್ದ ಶ್ರಮ ದೊಡ್ಡದು’ ಎಂದು ತಿಳಿಸಿದರು.</p>.<h3><strong>ಅಣ್ಣನ ಪರ ಗಟ್ಟಿ ದನಿ: </strong></h3>.<p>ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯದ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ, ಶಿವಕುಮಾರ್ ಪರವಾಗಿ ಸುರೇಶ ಗಟ್ಟಿಯಾಗಿ ದನಿ ಎತ್ತುತ್ತಾ ಬಂದಿದ್ದಾರೆ. ಸಂದರ್ಭ ಬಂದಾಗಲೆಲ್ಲಾ ದೆಹಲಿಗೆ ತೆರಳಿ, ಪಕ್ಷದ ನಾಯಕರ ಬಳಿ ಸಹೋದರನ ಪರವಾಗಿ ಸಿ.ಎಂ ಸ್ಥಾನದ ಹಕ್ಕು ಪ್ರತಿಪಾದನೆ ಮಾಡಿ ಬಂದಿದ್ದರು.</p>.<p>ಕಡೆಗೂ ಸುರೇಶ್ ಅವರು ಸಂದರ್ಶನದಲ್ಲಿ ತೋಡಿಕೊಂಡಿರುವ ತಮ್ಮ ಆಸೆಯಂತೆ, ಅಣ್ಣನನ್ನು ಮುಖ್ಯಮಂತ್ರಿಯಾಗಿ ನೋಡುವ ಕಾಲ ಕೂಡಿ ಬಂದಿದೆ. ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಇದೀಗ ಕ್ಷಣಗಣನೆ ಶುರುವಾಗಿದೆ.</p>.<h3><strong>ರಾಜಕಾರಣಕ್ಕೆ ಕರೆತಂದ ಅಣ್ಣ:</strong></h3>.<p>2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಎದುರಾದ ಉಪ ಚುನಾವಣೆಗೆ ಶಿವಕುಮಾರ್ ಅವರು ಸುರೇಶ್ ಅವರನ್ನು ನಿಲ್ಲಿಸಿದರು. ಇದರೊಂದಿಗೆ ಸುರೇಶ್ ರಾಜಕಾರಣ ಪ್ರವೇಶಿಸಿದರು.</p>.<p>ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಸುರೇಶ್ ಬರೋಬ್ಬರಿ 1.37 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರು. ಅದುವರೆಗೆ ಕನಕಪುರಕ್ಕೆ ಸೀಮಿತವಾಗಿದ್ದ ಸುರೇಶ್, ಜಿಲ್ಲೆ ಜೊತೆಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪಕ್ಷದೊಳಗೆ ತಮ್ಮ ಹಿಡಿತ ಸಾಧಿಸಿದರು. ಸ್ಥಳೀಯ ಆಡಳಿತ ಸಂಸ್ಥೆಗಳಿಂದಿಡಿದು ಸಹಕಾರ ಕ್ಷೇತ್ರದ ಚುನಾವಣೆಗಳಲ್ಲೂ ಸುರೇಶ್ ತಮ್ಮ ಬೆಂಬಲಿಗರಿಗೆ ಮಣೆ ಹಾಕುತ್ತಾ ಪಕ್ಷ ಸಂಘಟಿಸುತ್ತಿದ್ದಾರೆ. ಕಾರ್ಯಕರ್ತರ ಮನೆ ಕಾರ್ಯಕ್ರಮಗಳಿಗೆ ತಪ್ಪದೆ ಭೇಟಿ ನೀಡುವುದು ಅವರ ವಿಶೇಷತೆ.</p>.<h3><strong>ಸುರೇಶ್ ಮಗನಿದ್ದಂತೆ ಎಂದಿದ್ದ ಡಿಕೆಶಿ!</strong></h3>.<p>ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ವೀಕೆಂಡ್ ವಿತ್ ರಮೇಶ್’ ಎಂಬ ಜನಪ್ರಿಯ ಷೋದಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಆಗ ಪ್ರಶ್ನೆಯೊಂದಕ್ಕೆ ಅವರು ‘ಡಿ.ಕೆ. ಸುರೇಶ್ ತಮ್ಮನಾದರೂ ನನಗೆ ಮಗನಿದ್ದಂತೆ’ ಎಂದಿದ್ದರು. ಇದು ಅವರಿಗೆ ಸಹೋದರನ ಮೇಲಿನ ತಮ್ಮ ಅಕ್ಕರೆಗೆ ಸಾಕ್ಷಿಯಾಗಿತ್ತು. ಜಿಲ್ಲೆಯಲ್ಲಿ ರಾಜಕೀಯವಾಗಿ ಸೇರಿದಂತೆ ಎಂತಹದ್ದೇ ವಿಷಯಗಳ ಕುರಿತ ತೀರ್ಮಾನಗಳನ್ನು ಶಿವಕುಮಾರ್ ಅವರು ಸುರೇಶ್ ಅವರಿಗೆ ಬಿಟ್ಟಿದ್ದಾರೆ.</p>.<h3><strong>ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ! </strong></h3>.<p>ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬಂದಾಗಲೆಲ್ಲಾ ಸುರೇಶ್ ಅವರು ‘ನಿಧಾನವಾದರೂ ಸಿದ್ದರಾಮಯ್ಯ ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬ ಭರವಸೆ ನನಗಿದೆ’ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದರು. ಮುಖ್ಯಮಂತ್ರಿ ಬದಲಾವಣೆ ನಿರ್ಧಾರ ಹೊರ ಬೀಳುವುದಕ್ಕೆ ಮುಂಚೆ ನಾಲ್ಕೈದು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಸುರೇಶ್ ಅವರು ಹೈಕಮಾಂಡ್ ಹಂತದಲ್ಲಿ ಅಣ್ಣನ ಪರವಾಗಿ ವಕಾಲತ್ತು ವಹಿಸಿ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ದಪಡಿಸಿದ್ದರು ಎನ್ನುತ್ತಾರೆ ಅವರ ಆಪ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>