ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಸ್ ನಿಲ್ದಾಣದ ಬಳಿ ಬುಧವಾರ ಪ್ರಚಾರದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ರಾಹುಲ್ರನ್ನು ಟೀಕೆ ಮಾಡುವ ಸಚಿವರು ಮೋದಿಯನ್ನು ಯಾಕೆ ₹ 15 ಲಕ್ಷಕ್ಕೆ ಸೊನ್ನೆಯೆಷ್ಟು ಎಂದು ಕೇಳುವುದಿಲ್ಲ’ ಎಂದು ಮರು ಪ್ರಶ್ನಿಸಿದ ಅವರು ‘ರಾಷ್ಟ್ರದ ಜನರು ಆಶೀರ್ವಾದ ಮಾಡಿದರೆ ಪ್ರತಿ ಬಡವನ ಖಾತೆಗೆ ₹ 72 ಸಾವಿರ ಹಾಕುತ್ತೇವೆ’ ಎಂದರು.