ಕುದೂರು (ಮಾಗಡಿ): ‘ಹಾಲಿಗೆ ನೀರು ಬೆರೆಸಬೇಡಿ. ಎಲ್ಲ ಹಾಲನ್ನು ಡೇರಿಗೆ ಹಾಕುವ ಬದಲು ಮನೆ ಮಕ್ಕಳೆಲ್ಲರೂ ಹಾಲು ಕುಡಿಯುವುದನ್ನು ರೂಢಿಸಿಕೊಳ್ಳಬೇಕು’ ಎಂದು ವೈದ್ಯಾಧಿಕಾರಿ ಡಾ.ನವೀನ್ ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ಹಸುಗಳಿಗೆ ಉತ್ತಮ ಹುಲ್ಲು ಕೊಡಬೇಕು. ಕಾಲಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸಬೇಕು’ ಎಂದು ಸಲಹೆ ನೀಡಿದರು.
ಮುಖಂಡ ಕೆ.ಎಸ್.ಪ್ರಭಾಕರ್ ಮಾತನಾಡಿ, ಹಸುಗಳಿಗೆ ಹಾಲಿನ ಉತ್ಪಾದನೆಯಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳ ಆಹಾರ ನೀಡಬೇಕು. ಹಸುವಿನ ಹಾಲು ಕರೆಯುವಾಗ ಕೆಚ್ಚಲಿನ ಸುತ್ತಲಿನ ಭಾಗವನ್ನು ಸ್ವಚ್ಛಗೊಳಿಸಬೇಕು. ಹಾಲು ಕರೆಯುವಾಗ 15 ರಿಂದ 18 ನಿಮಿಷದೊಳಗಾಗಿ ಹಾಲು ಕರೆಯಬೇಕು’ ಎಂದು ಹೇಳಿದರು.