ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಹುದ್ದೆ ಬೇಡ: ಡಿಕೆಶಿ

Last Updated 29 ಅಕ್ಟೋಬರ್ 2019, 4:47 IST
ಅಕ್ಷರ ಗಾತ್ರ

ರಾಮನಗರ: ‘ಮುಖ್ಯಮಂತ್ರಿ ‌ಸ್ಥಾನದ ಬಗ್ಗೆ ಈಗ ಮಾತನಾಡಲ್ಲ. ಸದ್ಯ ಯಾವುದೇ ಹುದ್ದೆ ಬೇಡ. ಜನ ತೋರಿಸುವ ಪ್ರೀತಿಯೇ ಸಾಕು’ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.‌

ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಸೋಮವಾರ ಸಂಜೆ ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ನಾನು ಯುದ್ಧ ಗೆದ್ದು ಬಂದಿಲ್ಲ. ಆದರೆ ಆದರೆ ಜನರು ಪ್ರೀತಿ ತೋರಿಸಿದಾಗ ಬೇಡ ಎನ್ನಲು ಆಗಿಲ್ಲ. ರಾಜಕಾರಣ ಮಾಡುವಾಗ ಮಾಡುತ್ತೇನೆ. ಸದ್ಯ ಜನರ ಪ್ರೀತಿಗೆ ಧಕ್ಕೆ ಬರದ ಹಾಗೆ ಕೆಲಸ ಮಾಡುತ್ತೇನೆ’ ಎಂದರು.

ಪ್ರತಿ ಚುನಾವಣೆಗೂ ಮುನ್ನ ಕಬ್ಬಾಳಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಕಬ್ಬಾಳಿನ ಮಹಿಮೆ ಬಲ್ಲವರಿಗೆ ಗೊತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT