ರಾಮನಗರ: ‘ಮುಖ್ಯಮಂತ್ರಿ ಸ್ಥಾನದ ಬಗ್ಗೆ ಈಗ ಮಾತನಾಡಲ್ಲ. ಸದ್ಯ ಯಾವುದೇ ಹುದ್ದೆ ಬೇಡ. ಜನ ತೋರಿಸುವ ಪ್ರೀತಿಯೇ ಸಾಕು’ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.
ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ಸೋಮವಾರ ಸಂಜೆ ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.
‘ನಾನು ಯುದ್ಧ ಗೆದ್ದು ಬಂದಿಲ್ಲ. ಆದರೆ ಆದರೆ ಜನರು ಪ್ರೀತಿ ತೋರಿಸಿದಾಗ ಬೇಡ ಎನ್ನಲು ಆಗಿಲ್ಲ. ರಾಜಕಾರಣ ಮಾಡುವಾಗ ಮಾಡುತ್ತೇನೆ. ಸದ್ಯ ಜನರ ಪ್ರೀತಿಗೆ ಧಕ್ಕೆ ಬರದ ಹಾಗೆ ಕೆಲಸ ಮಾಡುತ್ತೇನೆ’ ಎಂದರು.
ಪ್ರತಿ ಚುನಾವಣೆಗೂ ಮುನ್ನ ಕಬ್ಬಾಳಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಕಬ್ಬಾಳಿನ ಮಹಿಮೆ ಬಲ್ಲವರಿಗೆ ಗೊತ್ತು ಎಂದರು.