ದನಗಳ ಜಾತ್ರೆಯಲ್ಲಿ ಸೇರಿರುವ ರೈತರು ಪ್ರಜಾವಾಣಿಯೊಂದಿಗೆ ಮಾತನಾಡಿದರು. ತಂಡೋಪತಂಡವಾಗಿ ರಾಸುಗಳೊಂದಿಗೆ ಬಂದಿರುವ ರೈತರಿಗೆ ಪಶುವೈದ್ಯ ಶಾಲೆ, ಕುಡಿಯುವ ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡಿಲ್ಲ. ಯುಗಾದಿ ಹಬ್ಬದಂದೇ ರೈತರು ರಾಸುಗಳೊಂದಿಗೆ ಮಾಗಡಿ ಜಾತ್ರೆಗೆ ಬರುವುದು ವಾಡಿಕೆಯಾಗಿದೆ. ಚುನಾವಣೆಯ ನೆಪದಲ್ಲಿ ಮುಳುಗಿರುವ ಅಧಿಕಾರಿಗಳು ರೈತರತ್ತ ಗಮನಹರಿಸಿಲ್ಲ ಎಂದು ರೈತ ವೆಂಕಟೇಶ್ ತಿಳಿಸಿದರು.