ಜಿಲ್ಲೆಯ ರಥಯಾತ್ರೆ ವ್ಯಾಪ್ತಿಯಲ್ಲಿ ಮೇಕೆದಾಟು, ಹಾರೋಬೆಲೆ, ಮುತ್ತತ್ತಿ, ಇಗ್ಗಲೂರು, ಕಣ್ವ, ಮಂಚನಬೆಲೆ, ವೈ.ಜಿ. ಗುಡ್ಡ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಸಂಗ್ರಹಣೆಗೆ ಯೋಜಿಸಲಾಗಿದೆ. ಒಟ್ಟು ಎಂಟು ಕಡೆಗಳಲ್ಲಿ ಜಲ ಸಂಗ್ರಹಣೆ ನಡೆಯಲಿದೆ. ಮೇಕೆದಾಟಿನಿಂದ ಆರಂಭಗೊಂಡು ಬೆಂಗಳೂರುವರೆಗೆ ನೂರಾರು ಕಿ.ಮೀ ಉದ್ದಕ್ಕೆ ರಥ ಸಾಗಲಿದೆ. ಈ ಸಂದರ್ಭದಲ್ಲಿ ಮಹಿಳೆಯರಿಂದ ಕಲಶಗಳ ಮೆರವಣಿಗೆ, ಕಲಾ ತಂಡಗಳಿಂದ ಅದ್ದೂರಿ ಸ್ವಾಗತ, ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಜೆಡಿಎಸ್ ಉದ್ದೇಶಿಸಿದೆ.