ಎಸ್ಡಿಪಿಐ ಸದಸ್ಯರಾದ ತಾಜೀಮ್, ಮೋಹಿನ್, ಮುಜಾಹಿದ್, ಸಕ್ರಮ್, ಜನೇದ್, ಶಫಿ, ಅಯಾಜ್, ಸುಹೇಲ್ ಸದ್ದಾಮ್, ವಸೀಮ್ ಮಾತನಾಡಿದರು. ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಸಮಿತಿಯ ದಶಕದ ಆಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು. ಪೋಷಕರಲ್ಲಿ ಅರಿವು ಮೂಡಿಸಲು ಹೊಸ ಮಸೀದಿ ಮೊಹಲ್ಲಾದಲ್ಲಿ ಮೆರವಣಿಗೆ ನಡೆಸಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಂತೆ ಮನವಿ ಮಾಡಲಾಯಿತು.